ಇತ್ತೀಚೆಗೆ ನಿಧನ ಹೊಂದಿದ ತೆಂಕು ತಿಟ್ಟಿನ ಖ್ಯಾತ ಭಾಗವತ ಕುಬಣೂರು ಶ್ರೀಧರ ರಾಯರ ಶ್ರದ್ಧಾಂಜಲಿ ಸಭೆ ನರಿಕೊಂಬು ಮೊಗರ್ನಾಡಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರೀ ಮಹಮ್ಮಾಯಿ ಯಕ್ಷಗಾನ್ ಕಲಾ ಕೇಂದ್ರ (ರಿ) ಅಬ್ಬಯಮಜಲು ಕರ್ಬೆಟ್ಟು ವತಿಯಿಂದ ನಡೆಯಿತು.
ಜಾಹೀರಾತು
ಕೇಂದ್ರದ ಅಧ್ಯಕ್ಷ ಕೃಷ್ಣರಾಜ್ ಭಟ್ ಕರ್ಬೆಟ್ಟು ಅವರು ಕುಬಣೂರು ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮಾಡಿದರು. ಯಕ್ಷಗಾನ ಗುರುಗಳು, ಸಂಸ್ಕೃತ ಪ್ರಾಧ್ಯಪಕರಾದ ಶ್ರೀವತ್ಸ ಕಾರ್ಕಳ ಕುಬಣೂರು ಅವರ ಗುಣಗಾನ ಮಾಡಿದರು. ಟ್ರಸ್ಟಿಗಳಾದ ಯತೀಶ್ ಶೆಟ್ಟಿ, ಡಾ. ಸುಭ್ರಹ್ಮಣ್ಯ ಭಟ್, ವೆಂಕಟೇಶ್ ರಾವ್ ಪುತ್ರೋಟಿಬೈಲ್, ವಾಸುದೇವ ಭಟ್ , ಪೋಷಕರಾದ ನಾಗೇಶ್ ಶೆಟ್ಟಿ ಬೊಂಡಾಲ. ಯಶವಂತ ಗಟ್ಟಿ, ಪಧ್ಮನಾಭ ಕರ್ಬೆಟ್ಟು, ದಾಮೋದರ ರಾಮಕುಂಜ, ವರಲಕ್ಷ್ಮಿ ಟೀಚರ್, ಪ್ರಮೀಳ ಯತೀಶ್ ಶೆಟ್ಟಿ ಹಾಗೂ ಕಲಾಭಿಮಾನಿಗಳು ಮತ್ತು ಕೇಂದ್ರದ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುಬಣೂರು ಶ್ರೀಧರ ರಾಯರಿಗೆ ಶ್ರದ್ಧಾಂಜಲಿ"