ಬಿ.ಸಿ.ರೋಡಿನ ಕೈಕುಂಜ ಪೂರ್ವ ಬಡಾವಣೆಯ ರಸ್ತೆಯೊಂದರಲ್ಲಿ ಹೊಂಡಗಳು ತುಂಬಿದ್ದು ಸಮಸ್ಯೆಗೆ ಕಾರಣವಾಗಿತ್ತು. ಹಲವು ಬಾರಿ ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಜಾಹೀರಾತು
ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು, ಶಾಲಾ ವಾಹನಗಳು ಓಡಾಡುತ್ತಿದ್ದು, ಸಮಸ್ಯೆ ಬಿಗಡಾಯಿಸಿತ್ತು. ಹೀಗಾಗಿ ಕೈಕುಂಜೆ ಪರಿಸರದ ಮಕ್ಕಳು ಭಾನುವಾರದ ರಜೆಯನ್ನು ಹೊಂಡ ಮುಚ್ಚುವ ಮೂಲಕ ಸದುಪಯೋಗಪಡಿಸಿಕೊಂಡರು.
ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ಹದಗೆಟ್ಟ ರಸ್ತೆ ಇದು. ಸ್ಥಳೀಯ ಪದ್ಮನಾಭ ಮಕ್ಕಳಿಗೆ ಸಾಥ್ ನೀಡಿ, ಕಲ್ಲು, ಜಲ್ಲಿ ತುಂಬುವ ಮೂಲಕ ದುರಸ್ತಿಗೊಳಿಸಲು ಸಹಕರಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಕ್ಕಳೇ ರಸ್ತೆ ಹೊಂಡ ಮುಚ್ಚಿದರು!"