ಪುದು ಗ್ರಾಮದ ಕೋಡಿಮಜಲು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಹಲ್ಲೆಗೆ ಯತ್ನಿಸಿದ ಕುರಿತು ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಕುಂಪನಮಜಲು ನಿವಾಸಿ ಕರೀಂ ಪಾರಾದ ವ್ಯಕ್ತಿ. ಪುದು ಗ್ರಾಪಂನಿಂದ ಕುಂಪನಮಜಲು ಪರಿಸರಕ್ಕೆ ಕುಡಿಯುವ ನಈರು ಬಿಡಲು ನಿಯೋಜಿತರಾಗಿರುವ ಇವರು ಬೆಳಗ್ಗೆ 5.30ರ ವೇಳೆ ಸ್ಕೂಟರ್ ನಲ್ಲಿ ಕೋಡಿಮಜಲು ಎಂಬಲ್ಲಿಗೆ ನೀರು ಬಿಡಲು ತೆರಳಿದ್ದ ಸಂದರ್ಭ ವ್ಯಕ್ತಿಯೊಬ್ಬ ಸ್ಕೂಟರ್ ನಿಲ್ಲಿಸಿ ದಾರಿ ಕೇಳಿದ್ದಾನೆಎ. ಈ ಸಂದರ್ಭ ಉತ್ತರಿಸಿದ ಕರೀಂ ಅವರ ಬಳಿ ಸ್ಕೂಟರ್ ಬಂದಿದ್ದು, ಅಪಾಯದ ಮುನ್ಸೂಚನೆ ಅರಿತ ಕರೀಂ ಮುಂದಕ್ಕೆ ಹೋಗಿದ್ದಾರೆ. ನೀರಿನ ಟ್ಯಾಂಕ್ ಬಳಿ ಮತ್ತಿಬ್ಬರು ನಿಂತಿದ್ದು, ಮಾರಕಾಸ್ತ್ರ ಬೀಸಿದ್ದಾರೆ ಎಂದು ಕರೀಂ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದು, ಹೆದರಿದ ಅವರು ಹೋಗುವ ಸಂದರ್ಭ ಸ್ಕೂಟರ್ ಬಿದ್ದಿದ್ದು ಗಾಯಗೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವ್ಯಕ್ತಿಗೆ ಹಲ್ಲೆಗೆ ಯತ್ನ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವ್ಯಕ್ತಿಗೆ ಹಲ್ಲೆಗೆ ಯತ್ನ"