ಗುಂಡುಗಳಿಗೂ ಎದೆಯೊಡ್ಡುವ ಜವಾನರೇ ದೇಶದ ರಿಯಲ್ ಹೀರೋಗಳು:ಅಣ್ಣಯ್ಯ ಕುಲಾಲ್

ಜಮ್ಮುವಿನ ಕುಪ್ವಾರದಲ್ಲಿ ಒಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯವನ್ನು ಆಕ್ರಮಿಸಿದ್ದ ಉಗ್ರರೊಂದಿಗೆ ಕಾಲು,ಎದೆಗೆ ಗುಂಡು ಹೊಕ್ಕರೂ ಹೆಚ್ಚುವರಿ ಸೈನಿಕರು ಬರುವ ತನಕ ಹೋರಾಡಿ ವೈರಿಗಳನ್ನು ಕೊಂದು ಮುಗಿಸಿ 5 ತಿಂಗಳ ನಂತರ ಮನೆಗೆ ಮರಳಿದ ಮುಡಿಪುವಿನ ವೀರಯೋಧ ಸಂತೋಷ್ ಕುಮಾರ್ ಅವರನ್ನು ಡಾ.ಅಣ್ಣಯ್ಯ ಕುಲಾಲ್ ನೇತೃತ್ವದ ದೇಶಭಕ್ತ ಸಂಘಟನೆಗಳ ನಾಯಕರು ಅಭಿನಂದಿಸಿ ಗೌರವಿಸಿದರು.

ಜಮ್ಮುವಿನ ಕುಪ್ವಾರದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಕಾಲು ಮತ್ತು ಎದೆಗೆ ಗುಂಡು ಬಿದ್ದು ಶರೀರವಿಡೀ ಜರ್ಜರಿತವಾಗಿದ್ದರೂ ಉಗ್ರರೋರ್ವನನ್ನು ಗುಂಡಿಕ್ಕಿ ಕೊಂದು ವೈರಿಗಳನ್ನು ಹಿಮ್ಮೆಟ್ಟಿಸಿದ ದ.ಕ ಜಿಲ್ಲೆಯ ಮುಡಿಪು ಕೋಡಕ್ಕಲ್ಲಿನ ವೀರಯೋಧ ಸಂತೋಷ್ ಕುಮಾರ್ ಅವರ ಯಶೋಗಾಥೆಯ ಬಗ್ಗೆ ವಿಶ್ವವಾಣಿ ಪತ್ರಿಕೆಯು ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಯನ್ನು ನೋಡಿದ ಕುಲಾಲ್ ಕುಂಬಾರ ಸಮುದಾಯದ ಹಿರಿಯ ಮುಖಂಡರಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ನೇತೃತ್ವದ ವಿವಿಧ ದೇಶ ಭಕ್ತ ಸಂಘಟನೆಗಳ ನಾಯಕರುಗಳು ಆದಿತ್ಯವಾರದಂದೇ ಯೋಧ ಸಂತೋಷರ ಮುಡಿಪುವಿನ ಮನೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಜಾಹೀರಾತು

ಈ ವೇಳೆ ಮಾತನಾಡಿದ ಅಣ್ಣಯ್ಯ ಕುಲಾಲ್ ಅವರು ಸಿನೆಮಾಗಳಲ್ಲಿ ಕಾಣುವ ರೀಲ್ ಹೀರೋಗಳನ್ನು ಎಷ್ಟೋ ಜನರು ಇಂದು ತಮ್ಮ ಆರಾಧ್ಯ ದೇವತೆಗಳಂತೆ ನೋಡುತ್ತಾರೆ.ಆದರೆ ನಿಜ ಜೀವನದಲ್ಲಿ ದೇಶಕ್ಕೆ ಕಂಠಕವೆನಿಸಿರುವ ಉಗ್ರರನ್ನು ದೇಹಕ್ಕೆ ಗುಂಡುಗಳು ಹೊಕ್ಕಿದ್ದರೂ ಸಹ ತನ್ನಲ್ಲಿದ್ದ ಪಿಸ್ತೂಲಿನಲ್ಲೇ ಹೊಡೆದು ಮುಗಿಸಿರುವ ಇಂತಹ ಹೀರೋಗಳು ನಮ್ಮೆಲ್ಲರಿಗೂ ಆರಾಧ್ಯ ದೇವತೆಗಳಾಗಬೇಕು. ಕಷ್ಟಪಟ್ಟು ಬೀಡಿ ಕಾಯಕ ಮಾಡಿ ಇಂತಹ ಮಗನನ್ನು ದೇಶಕ್ಕೆ ಸಮರ್ಪಿಸಿದ ವಿಮಲಾರಂತಹ ಮಹಾತಾಯಿಯ ಬಗ್ಗೆ ಹೇಳಲು ಶಬ್ದಗಳೇ ಇಲ್ಲ. ಸಂತೋಷ್ ಅವರೊಂದಿಗೆ ನಾವೆಲ್ಲರೂ ಜೊತೆಯಾಗಿ ಇರುತ್ತೇವೆಂದು ನುಡಿದರು.

ಸಂತೋಷ್ ಹಾಗೂ ಅವರ ಕುಟುಂಬದವರನ್ನು ದೇಶಭಕ್ತ ಸಂಘನೆಗಳ ನಾಯಕರುಗಳು ಜತೆಗೂಡಿ ಸನ್ಮಾನಿಸಿ ಗೌರವಿಸಿದರು.

ವಿಶ್ವಹಿಂದೂ ಪರಿಷತ್‌ನ ನಾಯಕರಾದ ಗೋಪಾಲ ಕುತ್ತಾರು, ವಿಕಾಸ್ ಮುಡಿಪು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ್ ಮಾತೃ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಬಂಗೇರ, ಮುಖಂಡರಾದ ಜಯ ಕುಲಾಲ್, ಹರೀಶ್ ಮುಜಿಲ, ನವೀನ್ ಕುಲಾಲ್, ವಿಶ್ವನಾಥ್ ಕುಲಾಲ್ ಬೆಂಗಳೂರು ಜತೆಗಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಗುಂಡುಗಳಿಗೂ ಎದೆಯೊಡ್ಡುವ ಜವಾನರೇ ದೇಶದ ರಿಯಲ್ ಹೀರೋಗಳು:ಅಣ್ಣಯ್ಯ ಕುಲಾಲ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*