ಖಿನ್ನತೆ ತೊರೆಯಲೂ ಸಹಕಾರಿ ಲವಂಗ

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

www.banwalnews.com

ಜಾಹೀರಾತು

ಲವಂಗ ಎಲ್ಲರಿಗೂ ತಿಳಿದಿರುವ ಸುಗಂಧಯುಕ್ತ ಮಸಾಲೆ ದ್ರವ್ಯ. ಅದು ಪದಾರ್ಥದ ರುಚಿ ಹಾಗು ಪರಿಮಳವನ್ನು ಹೆಚ್ಚಿಸುತ್ತದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಸಹ ತನ್ನ ಗುಣ ಹಾಗು ಪ್ರಭಾವದಿಂದಾಗಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.

  1. ಶೀತ ಹಾಗು ಕಪದ ಪರಿಣಾಮವಾಗಿ ತಲೆಭಾರ ಅಥವಾ ನೋವು ಕಾಣಿಸಿಕೊಂಡಾಗ ಲವಂಗವನ್ನು ಬಿಸಿನೀರಿನಲ್ಲಿ ಅರೆದು ಹಣೆಗೆ ಲೇಪಿಸಬೇಕು.
  2. ಲವಂಗದ ಚೂರ್ಣವನ್ನು ಮೂಗಿಗೆ ಹಾಕಿದರೆ ತಲೆನೋವು, ಮೂಗು ಕಟ್ಟುವುದು ಹಾಗು ಶೀತದ ಸಮಸ್ಯೆ ಕಡಿಮೆಯಾಗುತ್ತದೆ.
  3. ಚರ್ಮದ ಮೇಲೆ ಕುರ ಮೂಡಿದಾಗ ಆರಂಭದಲ್ಲೇ ಲವಂಗದ ಲೇಪ ಹಾಕಿದರೆ ಕುರ ಆರಿ ಹೋಗುತ್ತದೆ ಮತ್ತು ಕುರ ಮೂಡಿ ಸ್ವಲ್ಪ ದಿನಗಳಾದರೆ ಬೇಗನೆ ಹಣ್ಣಾಗಿ ಸೋರಲು ಸಹಕರಿಸುತ್ತದೆ.
  4. ಚರ್ಮದಲ್ಲಿ ತುರಿಕೆ ಕಂಡಾಗ ಲವಂಗದ ಹುಡಿಯನ್ನು ಆ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
  5. ಮುಖದಲ್ಲಿ ಮೊಡವೆಗಳಿದ್ದಾಗ ಲವಂಗದ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಮೊಡವೆಗಳ ಮೇಲೆ ಹಚ್ಚಬೇಕು.
  6. ಹುಳ ತಿಂದು ಹಲ್ಲುನೋವು ಕಾಣಿಸಿಕೊಂಡಾಗ ಲವಂಗ ಮತ್ತು ಉಪ್ಪಿನ ಮಿಶ್ರಣವನ್ನು ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟು ಕಚ್ಚಿ ಹಿಡಿಯಬೇಕು.
  7. ವಾತದ ಕಾರಣದಿಂದಾಗಿ ಸಂಧುಗಳಲ್ಲಿ ಊತ ಮತ್ತು ನೋವು ಇದ್ದಾಗ ಲವಂಗವನ್ನು ಗೋಮೂತ್ರದಲ್ಲಿ ಅರೆದು ಲೇಪ ಹಾಕಬೇಕು ಅಥವಾ ಲವಂಗದ ಎಣ್ಣೆ ಕಾಯಿಸಿ ಹಚ್ಚಿದರೂ ಆದೀತು.
  8. ಬಾಯಿಗೆ ರುಚಿ ಇಲ್ಲದಾಗ ಮತ್ತು ಅಜೀರ್ಣದ ಸಮಸ್ಯೆಯಿದ್ದಾಗ ಲವಂಗವನ್ನು ಬಾಯಲ್ಲಿ ಜಗಿಯಬೇಕು.
  9. ಲವಂಗವನ್ನು ಬಾಯಲ್ಲಿ ಹಾಕಿ ಜಗಿಯುವುದರಿಂದ ವಾಕರಿಕೆ, ಬಾಯಿಯ ದುರ್ಗಂಧ, ಕಡಿಮೆ ಜೋಲ್ಲುರಸದ ಸ್ರಾವ ಇತ್ಯಾದಿಗಳು ನಿವಾರಣೆಯಾಗುತ್ತದೆ.
  10. ಲವಂಗವನ್ನು ಮಿತವಾಗಿ ಬಳಸುವುದರಿಂದ ಪಿತ್ತಕೋಶದ ಶಕ್ತಿಯು ಅಧಿಕವಾಗುತ್ತದೆ ಮತ್ತು ಜೀರ್ಣಶಕ್ತಿಯು ವೃದ್ಧಿಯಾಗುತ್ತದೆ.
  11. ಲವಂಗ ಮತ್ತು ಹಿಂಗನ್ನು ನೀರಿನಲ್ಲಿ ಕುದಿಸಿ ಆ ನೀರನಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ದವಡೆಯ ತೊಂದರೆಗಳು ನಿವಾರಣೆಯಾಗುತ್ತದೆ.
  12. ಲವಂಗದ ಕಷಾಯವನ್ನು ಕುಡಿಯುವುದರಿಂದ ಅನಿಯಮಿತ ಮಲಪ್ರವೃತ್ತಿಯು ನಿವಾರಣೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿನ ಅಧಿಕ ವಾಯು ಕಡಿಮೆಯಾಗುತ್ತದೆ.
  13. ಲವಂಗದ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಕಪಪೂರಿತ ಕೆಮ್ಮು, ದಮ್ಮು ಹಾಗು ಸ್ವರಭೇದವು ಶಮನವಾಗುತ್ತದೆ. ಇದರಿಂದ ಬಿಕ್ಕಳಿಕೆಯು ಸಹ ಕಡಿಮೆಯಾಗುತ್ತದೆ.
  14. ಲವಂಗದ ಹುಡಿಯನ್ನು ದನದ ತುಪ್ಪದ ಜೊತೆ ಸೇವಿಸುವುದರಿಂದ ಮೊಲೆಹಾಲು ಅಧಿಕವಾಗುತ್ತದೆ ಮತ್ತು ಹಾಲು ಶುದ್ಧಿಯಾಗುತ್ತದೆ.
  15. ಲವಂಗದ ಕಷಾಯವು ಮೂತ್ರ ಪ್ರವೃತ್ತಿ ಸರಿಯಾಗಿ ಆಗಲು ಸಹಕರಿಸುತ್ತದೆ.
  16. ಮಾನಸಿಕ ಒತ್ತಡ ಹಾಗು ಖಿನ್ನತೆಯಲ್ಲಿ ಬೆಲ್ಲಹಾಕಿ ಮಾಡಿದ ಲವಂಗದ ಕಷಾಯವು ಉತ್ತಮ ಪ್ರಯೋಜನವನ್ನು ನೀಡುತ್ತದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಖಿನ್ನತೆ ತೊರೆಯಲೂ ಸಹಕಾರಿ ಲವಂಗ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*