ತುಳುನಾಡನ್ನು ಆಳಿದವರು

ಅಶೋಕ ಚಕ್ರವರ್ತಿಯ ಶಿಲಾಶಾಸನ ಕುಂದಾಪುರದ ಸಿದ್ದಾಪುರದಲ್ಲಿ ದೊರೆತಿದೆ. ಅದು ಕ್ರಿ.ಪೂ. 263ರಲ್ಲಿ ಬರೆದದ್ದು. ತುಳುನಾಡನ್ನು ಸತ್ಯಪುತ್ರರ ನಾಡು ಎಂದು ಬರೆಯಲಾಗಿದೆ. ಪ್ರಾಚೀನ ಆಳುಪರು ಕ್ರಿ.ಶ.650ರಿಂದ 990ವರೆಗೆ ಆಳಿದ ಬಗ್ಗೆ ದಾಖಲಾಗಿದೆ. ಮಧ್ಯಯುಗೀಯ ಆಳುಪರು ಕುಂದವರ್ಮರಿಂದ ವೀರಪಾಂಡ್ಯದೇವ ಕ್ರಿ.ಶ.1399ರವರೆಗೆ ಆಳಿದರು. ಬನವಾಸಿ ಕದಂಬರು ಕ್ರಿ.ಪೂ. 1500ರಲ್ಲಿ ಆಳಿದರು. ಇವರು ಆರ್ಯ ವಂಶದವರಾಗಿದ್ದು ಇದೇ ಶಾಖೆಯ ಒಂದು ಕುಟುಂಬ ಕೊಡಗಿಗೆ ಹೋಗಿ ಕೊಡವವಂಶವಾಯಿತು ಎಂದು ಚರಿತ್ರೆಯಲ್ಲಿ ಕಾಣುತ್ತದೆ. ಆಗ ತುಳು ಕನನ್ನಡ ಕೊಡವ ಭಾಷೆಗಳು ವ್ಯವಹಾರದಲ್ಲಿದ್ದವು. ಇವರ ಮನೆ ಮುಂದೆ ಕದಂಬ ವೃಕ್ಷ ಇದ್ದುದರಿಂದ ಇವರನ್ನು ಕದಂಬರೆಂದು ಕರೆಯುತ್ತಿದ್ದರು. ಕದಂಬ ನಂತರ ಚಾಲುಕ್ಯರ ಪ್ರವೇಶ ಆಯಿತು. ನಂತರ ರಾಷ್ಟ್ರಕೂಟರು ಕ್ರಿ.ಶ. 1336ರಲ್ಲಿ ವಿಜಯನಗರ ರಾಜರ ಕೈಕೆಳಗೆ ಇದ್ದರು.

12ನೇ ಶತಮಾನದಲ್ಲಿ ಮಹಮ್ಮದೀಯರರು ಬಂದ ಮೇಲೆ ಜೈನಮತವು ಹೀನಾಯ ಸ್ಥಿತಿಗೆ ಬಂತು. ಕ್ರಿ.ಪೂ. 3ನೇ ಶತಮಾನದಲ್ಲಿ ಜೈನರು ಮತಪ್ರಚಾರಕ್ಕೆ ತುಳುನಾಡಿಗೆ ಬಂದರು. ಇಲ್ಲಿಯ ಅನೇಕ ಜನ ಜೈನರಾಗಿ ಮತಾಂತರಗೊಂಡರು. ಜೈನರು ತುಂಡರಸರು ಕದಂಬರು, ಚಾಲುಕ್ಯರರು, ರಾಷ್ಟ್ರಕೂಟರ, ಹೊಯ್ಸಳ ಬಲ್ಲಾಳರು ಮತ್ತು ವಿಜಯನಗರರದ ಅರಸರ ಕಾಲದಲ್ಲಿ ತುಂಡರಸರಾಗಿ ತುಳುನಾಡನ್ನು ಆಳಿದರು. ಕ್ರಿ.ಶ.1560ರಿಂದ 1763ರವರೆಗೆ ಇಕ್ಕೇರಿ ಅಳಸರು ತುಳುನಾಡನ್ನು ಆಳಿದರು. ಆಗ ರಾಮರಾಜ ಕ್ಷತ್ರಿಯರನ್ನು ಕೋಟೆ ಕಾಯಲು ಇಕ್ಕೇರಿಯಿಂದ ಕರೆತಂದರು. ಕ್ರಿ.ಶ.968ರಿಂದ ನಾಥಪಂಥ ಕದಿರೆ, ವಿಟ್ಲದಲ್ಲಿ ಸ್ಥಾಪನೆಗೊಂಡಿತು. ಶಂಕರ, ಮಧ್ವರೂ ತುಳುನಾಡಿನಲ್ಲಿ ಪ್ರಭಾವ ಬೀರಿದ್ದಾರೆ. ಕ್ರಿ.ಶ.7ನೇ ಶತಮಾನದಿಂದ ಮುಸ್ಲಿಮರು ವ್ಯಾಪಾರಕ್ಕೆಂದು ತುಳುನಾಡಿಗೆ ಬಂದರು. ಕ್ರಿ.ಶ.1524ರಿಂದ ವಾಸ್ಕೋಡಿಗಾಮ ತುಳುನಾಡಿನ ಸಂಪರ್ಕಕ್ಕೆ ಬಂದ. ಕ್ರಿ.ಶ.1698ರಿಂದ ಧರ್ಮಪ್ರಚಾರಕ್ಕೆ ಪ್ರೊಟೆಸ್ಟೆಂಟರು ಬಂದರು. ಹೈದರಾಲಿ, ಟಿಪ್ಪು, ಫ್ರೆಂಚರು ಇಂಗ್ಲೀಷರು ತುಳುನಾಡಿನ ಆಡಳಿತವನ್ನು ಕೈಗೆತ್ತಿಕೊಂಡರು ತುಂಡರಸರಾದ ಕಾರ್ಕಳ ಭೈರವರಸು, ಮೂಡುಬಿದಿರೆಯ ಚೌಟರು, ವೇಣೂರು ಅರುವದ ಅಜಿಲರು, ಬಂಗಾಡಿಯ ಬಂಗರಸರು, ಬೈಲಂಗಗಡಿಯ ಮೂಲರು ತುಂಡರಸರಾಗಿ ತುಳುನಾಡನ್ನು ಆಳಿದರು.

ಜಾಹೀರಾತು

ಲೇಖಕರ ದೂರವಾಣಿ ಸಂಖ್ಯೆ: 9481917204

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

B Thammayya
ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Be the first to comment on "ತುಳುನಾಡನ್ನು ಆಳಿದವರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*