ಪರಕೀಯರು ನಮ್ಮ ಭೂತಗಳನ್ನು ದುಷ್ಟವಾಗಿಸಿದರು

ದಕ್ಷಿಣ ಭಾರತದ ಜನಾಂಗವನ್ನು ದ್ರಾವಿಡರೆಂದು, ಉತ್ತರ ಭಾರತದ ಜನರನ್ನು ಆರ್ಯರೆಂದು ಕರೆಯುತ್ತಾರೆ. ಆರ್ಯರು ಚಂದ್ರನ ಚಲನೆಯನ್ನು ನಂಬಿದರೆ ದ್ರಾವಿಡರು ಸೂರ್ಯನ ಚಲನೆಯನ್ನು ಅನುಸರಿಸುತ್ತಾರೆ. ಆರ್ಯರು ದೇವರ ಕಲ್ಪನೆಯನ್ನು ಹೊಂದಿದ್ದರೆ, ದ್ರಾವಿಡರು ತಮ್ಮ ಹಿರಿಯರನ್ನು ನಂಬುತ್ತಿದ್ದರು. ಆರ್ಯರಿಗೆ ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಕಲ್ಪನೆ ಇದ್ದರೆ, ದ್ರಾವಿಡರಿಗೆ ಸತ್ತವರು ಅಗೋಚರವಾಗಿ ನಮಗೆ ಸಹಾಯ ಮಾಡುತ್ತಾರೆ ಎಂಬ ಕಲ್ಪನೆ ಇದೆ. ಆದುದರಿಂದ ದ್ರಾವಿಡರು ತಮ್ಮ ಹಿರಿಯರನ್ನೇ ಪೂಜಿಸುವ ಕ್ರಮ ಇದೆ. ಇದೇ ಮುಂದೆ ಭೂತಗಳಾಗಿ ದೈವಗಳಾಗಿ ಮನೆಯ, ಊರಿನ, ಬೂಡಿನ, ಗುತ್ತಿನ ರಕ್ಷಕ ದೈವಗಳಾಗಿವೆ

ಜಾಹೀರಾತು

ಸಂಗ ಸಾಹಿತ್ಯದಲ್ಲಿ ಸುಮಾರು ಎರಡನೇ ಶತಮಾನದಲ್ಲಿ ಭೂತ ದೈವಗಳ ವಿಚಾರ ಪ್ರಸ್ತಾವಿಸಲಾಗಿದೆ. ಆ ಕಾಲದಲ್ಲಿ ಭೂತಗಳು ಕರುಣೆ, ದಯಾಮಯಿಯಾಗಿದ್ದರು. ಆದುದರಿಂದಲೇ ಆ ಕಾಲದಲ್ಲಿ ಭೂತಗಳ ಹೆಸರನ್ನು ಜನರು ಇಟ್ಟುಕೊಳ್ಳುವ ಕ್ರಮವಿತ್ತು. ಉದಾಹರಣೆಗೆ ಭೂತ ಪಾಂಡಿಯನ್, ಭೂತನಾರ್, ಸೇತ್ತ ಭೂತನಾರ್ ಎಂದು ಹೆಸರುಗಳು ಇದ್ದವು.

ಗುತ್ತು, ಬಾರ್ಕೆ, ಬಾಳಿಕೆ, ಭಾವ ಬೂಡು, ನಟ್ಟಿಲ್ಲು, ಜನನ, ಮೊದಲಾದ ಘನವೆತ್ತ ಮನೆತನಗಳಿಗೆ ಪ್ರತ್ಯೇಕ ಭೂತಗಳು ಇದ್ದು, ಅವುಗಳ ಆರಾಧನೆ, ನೇಮ, ಕೋಲ, ಅಗೇಲು ಸೇವೆಗಳು ನಡೆಯುತ್ತಿವೆ. ಅವುಗಳ ಹುಟ್ಟು, ಬೆಳವಣಿಗೆ, ಕಾರ್ಣಿಕಗಳ ಬಗ್ಗೆ ಪಾಡ್ದನಗಳಲ್ಲಿ ವಿವರಿಸಲಾಗಿದೆ. ಪ್ರತಿ ತರವಾಡು ಮನೆಗಳಲ್ಲಿ ಈಗಲೂ ಹಿರಿಯಯ ಎಂಬ ದೈವ ಇದ್ದು, ಈ ದೈವ ಆ ತರವಾಡಿನ ಮೂಲಪುರುಷರಾಗಿರುತ್ತಾರೆ.

ತುಳುನಾಡಿನಲ್ಲಿ ಮಂಗಳೂರು ಮತ್ತು ಬಾರಕ್ಕರ ಎರಡು ರಾಜಧಾನಿಗಳಿದ್ದವು. ಕರಾವಳಿ ಭಾಗಕ್ಕೆ ವ್ಯಾಪಾರಕ್ಕಾಗಿ ವಿದೇಶಿಯರು ಬರಲು ಆರಂಭವಾದ ಮೇಲೆ ಇಲ್ಲಿಯ ಸಿರಿವಂತಿಕೆ ನೋಡಿ ಈ ತುಳುನಾಡನ್ನು ವಶಪಡಿಸುವ ಹುನ್ನಾರ ನಡೆಯಿತು. ಹೀಗೆ ಬಂದ ಪೋರ್ಚುಗೀಸರು, ಫ್ರೆಂಚರು, ಇಂಗ್ಲೀಷರು ಭೂತಗಳನ್ನು ಡೆವಿಲ್ ಎಂದೂ ಅನಿಷ್ಠ ಎಂದೂ ಹೇಳಿದರು.  ಇವರ ಪ್ರಭಾವದಿಂದ ದಯಾಮಯವಾಗಿದ್ದ ನಮ್ಮ ಭೂತಗಳು ಕ್ರೂರಿಯಾದವು. ಇನ್ನೊಬ್ಬರ ನಂಬಿಕೆಗಳನ್ನು ಕೊಲ್ಲುತ್ತಾ ಮತಪ್ರಚಾರ ಮಾಡುವ ಸಂದರ್ಭ ತುಳುವರ ನಂಬಿಕೆಗಳನ್ನು ಕೊಲ್ಲಲಾಯಿತು. ಬಾಸೆಲ್ ಮಿಷನ್ ನವರು ತುಳುವನ್ನು ಕನ್ನಡ ಅಕ್ಷರಗಳಲ್ಲಿ ತುಳು ಸುವಿಶೇಷ ಎಂಬ ಪುಸ್ತಕವನ್ನು 1842ರಲ್ಲಿ ಪ್ರಕಟಿಸಿದರು. 1859ರಲ್ಲಿ ತುಳು ಬೈಬಲ್ ಪ್ರಕಟವಾಯಿತು. ಹೀಗೆ ತುಳು ಸಾಹಿತ್ಯ ಕನ್ನಡದಲ್ಲಿ ರಚನೆಯಾಯಿತು. ನಿಮ್ಮ ಎಲ್ಲ ಕಷ್ಟಗಳಿಗೆ ಭೂತಗಳೇ ಕಾರಣ ಎಂದು ಹೇಳಿ ಮತಾಂತರ ಮಾಡಲು ಆರಂಭಿಸಿದಾಗ ಭೂತಗಳು ದುಷ್ಟರು ಎಂಬಂತೆ ನೋಡಲಾರಂಭಿಸಿದರು.

ಜಾಹೀರಾತು

ಲೇಖಕರ ದೂರವಾಣಿ ಸಂಖ್ಯೆ: 9481917204

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪರಕೀಯರು ನಮ್ಮ ಭೂತಗಳನ್ನು ದುಷ್ಟವಾಗಿಸಿದರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*