4, 5 ರಂದು ಸಮರ್ಪಣ್-2017

ನೃತ್ಯಾಂಗನ್ ಸಂಸ್ಥೆ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4, 5 ರಂದು ಸಮರ್ಪಣ್-2017’ ಎಂಬ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ.

ಫೆ.4ರಂದು ಸಾಯಂಕಾಲ 5.30ಕ್ಕೆ ಕಲಾ ಇತಿಹಾಸ ತಜ್ಞ, ಲೇಖಕ, ಕಲಾವಿಮರ್ಶಕ ಆಶಿಶ್ ಮೋಹನ್ ಖೋಕರ್ ನೃತ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರವಿ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿರುವರು. 5.45ಕ್ಕೆ ಮಂಗಳೂರಿನ ಕಲಾವಿದೆ ಕಾವ್ಯಾ ಮಹೇಶ್ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. 6.15ಕ್ಕೆ ದೆಹಲಿಯ ಕಲಾವಿದೆ ದಕ್ಷಿಣಾ ವೈದ್ಯನಾಥನ್ ಶೂರ್ಪನಖಾ ಎಂಬ ಭರತನಾಟ್ಯ ಸಾದರಪಡಿಸಲಿದ್ದಾರೆ. ಬಳಿಕ, 7.15ಕ್ಕೆ ಹೈದರಾಬಾದ್‌ನ ಕಲಾವಿದೆ ಪೂರ್ವಾಧನಶ್ರೀ ವಿಲಾಸಿನೀ ನಾಟ್ಯಂ ಎಂಬ ವಿಶೇಷ ನಾಟ್ಯ ಪ್ರಕಾರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.

ಜಾಹೀರಾತು

ವಿಶೇಷ ಉಪನ್ಯಾಸ:

ಸಮರ್ಪಣ್ ಅಂಗವಾಗಿ ಫೆ.5ರಂದು ಬೆಳಗ್ಗೆ 11 ಗಂಟೆಗೆ ಬಲ್ಲಾಳ್‌ಭಾಗ್‌ನ ಶ್ರೀದೇವಿ ಕಾಲೇಜು ರಸ್ತೆಯಲ್ಲಿರುವ ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಕಲಾ ಇತಿಹಾಸಜ್ಞ ಆಶಿಶ್ ಮೋಹನ್ ಖೋಕರ್, ಒಂದು ಶತಮಾನದ ಭಾರತೀಯ ನೃತ್ಯಕ್ಷೇತ್ರ ಕಂಡ ವಿಶಿಷ್ಟ ಘಟ್ಟಗಳು ಮತ್ತು ಪ್ರವೃತ್ತಿಗಳು’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಜಾಹೀರಾತು

ಫೆ.5ರಂದು ಸಾಯಂಕಾಲ 5.30ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮಂಗಳೂರಿನ ರಮ್ಯಾ ರಾವ್ ಭರತನಾಟ್ಯ, 6 ಗಂಟೆಗೆ ಬೆಂಗಳೂರಿನ ಸ್ವೀಕೃತ್ ಬಿ.ಪಿ. ಕಥಕ್ ಮತ್ತು 7 ಗಂಟೆಗೆ ಚೆನ್ನೈಯ ಶ್ವೇತಾ ಪ್ರಚಂಡೆ ಭರತನಾಟ್ಯ ಸಾದರಪಡಿಸಲಿದ್ದಾರೆ.  ಹಿಮ್ಮೇಳದಲ್ಲಿ ನಂದಿನಿ ಸಾಯಿ ಗಿರಿಧರ್ (ಹಾಡುಗಾರಿಕೆ), ಸಜಿಲಾಲ್ (ನಟುವಾಂಗ), ಕಾರ್ತಿಕೇಯನ್ (ಮೃದಂಗ) ಮತ್ತು ರಿಜೇಶ್ (ವಯಲಿನ್) ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಬ್ಯಾಂಕ್ ಸಹಪ್ರಾಯೋಜಕತ್ವದಲ್ಲಿ ನೃತ್ಯಾಂಗನ್ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "4, 5 ರಂದು ಸಮರ್ಪಣ್-2017"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*