ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದು ಚಾಲಕ ಹಾಗೂ ಸವಾರ ಗಂಬೀರ ಗಾಯಗೊಂಡ ಘಟನೆ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಅಡ್ಯನಡ್ಕ ಪೇಟೆಯ ಸಮೀಪ ನಡೆದಿದೆ.
ರಿಕ್ಷಾ ಚಾಲಕ ಅಡ್ಯನಡ್ಕ ಕೊಲ್ಲಪದವು ಮೂಡಂಬೈಲು ನಿವಾಸಿ ಈಶ್ವರ (35), ಪ್ರಯಾಣಿಕ ರಾಮು (62) ಗಾಯಗೊಂಡಿದ್ದಾರೆ. ಮರಕ್ಕಿಣಿ ಕಡೆಯಿಂದ ಅಡ್ಯನಡ್ಕ ಪೇಟೆಗೆ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಕಾಂಡ ಕ್ಷೀಣಿಸಿದ ಉಪ್ಪಳಿಗದ ಮರ ಬಿದ್ದಿದೆ. ಇದರಿಂದ ರಿಕ್ಷಾದೊಳಗಿದ್ದವರು ಅದರ ಒಳಗೆ ಸಿಲುಕಿ ಹಾಕಿಗೊಂಡು ತಲೆ ಗಂಬೀರ ಗಾಯವಾಗಿದೆ. ನಾಗರೀಕರು ರಿಕ್ಷಾದಲ್ಲಿ ಸಿಲುಕಿದವರನ್ನು ಹೊರ ತೆಗೆದು ವಿಟ್ಲ 108 ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವು ಮಾಡಿ ವಾಹನ ಸಂಚಾರ ಸುಗಮವಾಗುವಂತೆ ಮಾಡಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಆಟೋ ಮೇಲೆ ಉರುಳಿದ ಮರ, ಚಾಲಕ, ಸವಾರ ಗಂಭೀರ"