ತೆರಿಗೆ ತಪ್ಪಿಸಲು ಯಾರನ್ನೂ ಬಿಡೆವು. ಇಂದು ಯುವ ಸಮೂಹ ಡಿಜಿಟಲ್ ಪಾವತಿಯತ್ತ ಮನ ಮಾಡಬೇಕು ಎಂದು ಕೇಂದ್ರ ವಾಣಿಜ್ಯ, ಕೈಗಾರಿಕೆ, ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಗುರುವಾರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೆಡೆ ಪ್ರಪಂಚದಾದ್ಯಂತ ನಮ್ಮ ದೇಶವನ್ನು ಅದ್ಭುತ ಮಾರುಕಟ್ಟೆಯ ತಾಣವೆಂದು ಬಿಂಬಿಸುತ್ತಾ ಬರುವ ಸಂದರ್ಭದಲ್ಲಿ ಇದು ತೆರಿಗೆ ಕಳ್ಳರ ಸ್ವರ್ಗವಾಗುವುದನ್ನು ಸಹಿಸಲು ಸಾಧ್ಯವೇ?, ಯಾರೋ ಕೆಲವು ಮಂದಿ ಪ್ರಾಮಾಣಿಕರಾಗಿ ಉಳಿದ ಹಲವರು ತಮ್ಮ ಮನೆಯ ಹಾಸಿಗೆಯಡಿ ಹಣ ಬಚ್ಚಿಟ್ಟುಕೊಳ್ಳುವುದನ್ನು ಒಪ್ಪಿಕೊಳ್ಳಬೇಕೇ? ನಮ್ಮ ಸರ್ಕಾರದ ಕಠಿಣ ನಿರ್ಧಾರಗಳು ತೆರಿಗೆಗಳ್ಳರ ಅಂತರಂಗದಲ್ಲಿ ನಡುಕ ಹುಟ್ಟಿಸುತ್ತದೆ. ಯುವಸಮೂಹ ಡಿಜಿಟಲ್ ಪಾವತಿಯೆಡೆಗೆ ಮನಮಾಡಬೇಕು ಮಾತ್ರವಲ್ಲದೆ ಹೆತ್ತವರನ್ನೂ ಆ ಕಡೆಗೆ ಒಯ್ಯಬೇಕು ಎಂದು ಸಲಹೆ ನೀಡಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಏಳನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಡಿಜಿಟಲ್ ಪಾವತಿ ಪ್ರೋತ್ಸಾಹಿಸಿ: ನಿರ್ಮಲಾ ಸೀತಾರಾಮನ್"