ಎಪಿಎಂಸಿ ಚುನಾವಣೆಗೆ ನೇರ ಹಣಾಹಣಿ

  • ಕಣದಲ್ಲಿದ್ದಾರೆ 25 ಅಭ್ಯರ್ಥಿಗಳು
  • 11 ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ
  • 46001 ಮತದಾರು
  • ಚುನಾವಣಾ ಪ್ರಚಾರ ಆರಂಭ

https://bantwalnews.com report

ಕೋರ್ಟು ತಡೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಂಟ್ವಾಳ ಎಪಿಎಂಸಿ ಚುನಾವಣೆಗೆ ಮತ್ತೆ ದಿನ ನಿಗದಿಯಾಗಿದೆ. ಜನವರಿ 12ರಂದು ಮತದಾನ ನಡೆಯಲಿದೆ. 13ರಂದು ಅವಶ್ಯವಿದ್ದಲ್ಲಿ ಮರುಮತದಾನ, 14ರಂದು ಮತ ಎಣಿಕೆ ನಡೆಯಲಿದೆ. ಕಣದಲ್ಲಿದ್ದಾರೆ ಒಟ್ಟು 25 ಅಭ್ಯರ್ಥಿಗಳು.

ಜಾಹೀರಾತು

ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು. ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ  ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ  ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.

ಕ್ಷೇತ್ರಗಳು ಹಾಗು ಕಣದಲ್ಲಿರುವವರ ವಿವರ ಹೀಗಿವೆ.

ಜಾಹೀರಾತು

1. ಸಂಗಬೆಟ್ಟು (ಸಾಮಾನ್ಯ, ಮತದಾರರು-3997), ಅಭ್ಯರ್ಥಿಗಳು: ಪದ್ಮರಾಜ ಬಲ್ಲಾಳ ಮಾವಂತೂರು ಮತ್ತು ವಸಂತ ಕುಮಾರ ಅಣ್ಣಳಿಕೆ

2. ಚನ್ನೈತೋಡಿ (ಸಾಮಾನ್ಯ ಮಹಿಳೆ, ಮತದಾರರು-3903), ಅಭ್ಯರ್ಥಿಗಳು: ಭಾರತಿ ಎಸ್. ರೈ ಪಡಂತರಕೋಡಿ ಮತ್ತು ಮಲ್ಲಿಕಾ ಅಜಿತ್ ಶೆಟ್ಟಿ.

3. ಅಮ್ಟಾಡಿ (ಹಿ.ವ.ಅ, ಮತದಾರರು-4715), ಅಭ್ಯರ್ಥಿಗಳು:ದಿವಾಕರ ಪಂಬದಬೆಟ್ಟು, ರಮೇಶ ಪೂಜಾರಿ ಬಟ್ಟಾಜೆ.

ಜಾಹೀರಾತು

4. ಕಾವಳಮೂಡೂರು (ಸಾಮಾನ್ಯ, ಮತದಾರರು-4346), ಅಭ್ಯರ್ಥಿಗಳು: ವಿಶ್ವನಾಥ ಸಾಲಿಯಾನ್ ಬಿತ್ತ, ಹರಿಶ್ಚಂದ್ರ ಪೂಜಾರಿ ಕಜೆಕಾರು.

5. ಕೊಳ್ನಾಡು (ಹಿ.ವ.ಬಿ.,ಮತದಾರರು-3890), ಅಭ್ಯರ್ಥಿಗಳು:ಬಿ.ಚಂದ್ರಶೇಖರ ರೈ, ಯೋಗೀಶ ಆಳ್ವ ಪುದ್ದೋಟು.

6. ಅಳಕೆ(ಹಿ.ವ.ಬಿ.ಮಹಿಳೆ, ಮತದಾರರು-4054), ಅಭ್ಯರ್ಥಿಗಳು: ಗೀತಾಲತಾ ಟಿ.ಶೆಟ್ಟಿ, ಕೆ.ಭವಾನಿ ರೈ.

ಜಾಹೀರಾತು

7. ಕೆದಿಲ(ಅನುಸೂಚಿತ ಪಂಗಡ, ಮತದಾರರು-3946), ಅಭ್ಯರ್ಥಿಗಳು: ಜಗದೀಶ ಡಿ, ಸುಂದರ ನಾಯ್ಕ.

8. ಮಾಣಿ(ಸಾಮಾನ್ಯ, ಮತದಾರರು-4768), ಅಭ್ಯರ್ಥಿಗಳು: ಬಿ.ನೇಮಿರಾಜ ರೈ, ಬಾಲಕೃಷ್ಣ ಆಳ್ವ.

9. ಕಡೇಶ್ವಾಲ್ಯ (ಸಾಮಾನ್ಯ , ಮತದಾರರು-3772), ಅಭ್ಯರ್ಥಿಗಳು: ಚಂದ್ರಶೇಖರ ಪೂಜಾರಿ, ಆರ್. ಚೆನ್ನಪ್ಪ ಕೋಟ್ಯಾನ್.

ಜಾಹೀರಾತು

10. ಪಾಣೆಮಂಗಳೂರು (ಸಾಮಾನ್ಯ , ಮತದಾರರು-4004), ಅಭ್ಯರ್ಥಿಗಳು: ಅರವಿಂದ ಭಟ್, ಕೆ. ಪದ್ಮನಾಭ ರೈ.

11. ತುಂಬೆ (ಅನುಸೂಚಿತ ಜಾತಿ,ಮತದಾರರು-4402), ಅಭ್ಯರ್ಥಿಗಳು: ಚಂದ್ರಹಾಸ, ಪದ್ಮನಾಭ ನರಿಂಗಾನ, ವಿಠಲ ಸಾಲ್ಯಾನ್.

12. ವರ್ತಕರ ಕ್ಷೇತ್ರ (ಮತದಾರರು-204) ಅಭ್ಯರ್ಥಿಗಳು: ಬಾಲಕೃಷ್ಣ ಆಳ್ವ, ಎಸ್.ಎಂ.ಹುಸೈನ್.

ಜಾಹೀರಾತು

ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.ಕೃಷಿಕರು, ವರ್ತಕರ ಅನುಕೂಲಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ಬಿಜೆಪಿ ತಮ್ಮ ಬೆಂಬಲಿತ ಅಭ್ಯಥಿ೯. ಪರ ಮತಯಾಚನೆ ಮಾಡಲಿದ್ದರೆ, ರಾಜ್ಯ ಸರಕಾರ ಕೃಷಿಕರಿಗೆ ಜಾರಿ ತಂದಿರುವ ಯೋಜನೆಯನ್ನು ಮುಂದಿಟ್ಟು ಕಾಂಗ್ರೆಸ್ ತಮ್ಮ ಬೆಂಬಲಿತರ ಪರ ಮತಯಾಚನೆ ಮಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಎಪಿಎಂಸಿ ಚುನಾವಣೆಗೆ ನೇರ ಹಣಾಹಣಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*