ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ

ಬಂಟ್ವಾಳ: ವಿಕಾಸದತ್ತ ಸಾಗುವ ಜ್ಞಾನ ಮಾನವನಿಗೆ ಮಾತ್ರ ಇದ್ದು, ಮನುಷ್ಯ ಜನ್ಮದಲ್ಲಿ ಮಾನವ ಧರ್ಮದವನ್ನು ಪರಿಪಾಲಿಸಿಕೊಂಡು ಹೋಗುವ ಅಗತ್ಯವಿದೆ. ಪಂಚ ತತ್ವಗಳನ್ನು ಎಲ್ಲರೂ ಸಮಾನವಾಗಿ ಪಾಲ್ಗೊಂಡು ಜೀವನ ನಡೆಸಬೇಕು. ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ ಬೇಗನೇ ಪ್ರಾಪ್ತಿಯಾಗುತ್ತದೆ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಕನ್ಯಾನ ಸಮೀಪದ ಕಬ್ಬಿನಮೂಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ತ್ವಾಹ ಮಸ್ಜಿದ್‌ನ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಜೀವನವೆಂಬ ಪಾಠ ಶಾಲೆಯಲ್ಲಿ ಸಮಾನತೆಯ ಬದುಕು ನಡೆಸಿ ಉತ್ತೀರ್ಣವಾಗಬೇಕು. ನಾನು ನಮ್ಮನ್ನು ತಿಳಿದು ಪ್ರೀತಿ ವಿಶ್ವಾಸದ ಒಡನಾಟದಲ್ಲಿ ಸಹೋದರತ್ವದಿಂದ ಬಾಳಿ ಬದುಕಿದಾಗ ಸಮಾಜದಲ್ಲಿ ಸೌಹಾರ್ಧತೆ ಮುಂದುವರಿಯುತ್ತದೆ ಎಂದು ಹೇಳಿದರು.

ಮಸೀದಿಯನ್ನು ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಸಯ್ಯಿದ್ ಇಬ್ರಾಹಿಂ ಬಾತೀಷ ತಂಙಳ್ ಆನೆಕಲ್ಲು ದುವಾಃ ಆಶೀರ್ವಚನ ನೀಡಿದರು. ನಿಯಾಝ್ ಕಾಮಿಲ್ ಸಖಾಫಿ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ಹಾಜಿ ಉಸ್ಮಾನ್ ಕರೋಪಾಡಿ, ವೆಂಕಟೇಶ್ ಕುಮಾರ್ ಭಟ್ ಬದಿಕೋಡಿ, ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ ಅಬ್ದುಲ್ ಜಲೀಲ್ ಕರೋಪಾಡಿ, ಕಬ್ಬಿನ ಮೂಲೆ ತ್ವಾಹ ಮಸ್ಜಿದ್‌ನ ಅಧ್ಯಕ್ಷ ಕೆ.ಎಂ ಅಬ್ದುಲ್ಲ, ಕೆ.ಎಂ ಮುಹಮ್ಮದ್ ಸಹದ್, ಇಬ್ರಾಹಿಂ ಫೈಝಿ ಕನ್ಯಾನ, ಹಾಜಿ ಕೆ.ಕೆ ಸುಲೈಮಾನ್ ಪೈಝಿ, ಹಕೀಂ ಮದನಿ ಕರೋಪಾಡಿ, ದಾವೂದ್ ಸಅದಿ ಸಮ್ಮಡ್ಕ, ಹಾಜಿ ಹಮೀದ್ ಮುಸ್ಲಿಯಾರ್, ಹಮೀದ್ ಸಖಾಫಿ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಪಿ.ಎಂ ಮೂಸಲ್ ಫೈಝಿ ಉಪಸ್ಥಿತರಿದ್ದರು.

ಹೈದರ್ ಅಲಿ ನಈಮಿ ಕಬ್ಬಿನಮೂಲೆ ಸ್ವಾಗತಿಸಿದರು. ಅಶ್ರಫ್ ಮದನಿ ಕಬ್ಬಿನಮೂಲೆ ವಂದಿಸಿದರು. ಹಸೈನಾರ್ ಮಾರಾಠಿ ಮೂಲೆ ಸಹಕರಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*