ಲೇಖನಿ ಮಾದರಿ ಮದುವೆ ಆಮಂತ್ರಣ

ಬಂಟ್ವಾಳ: ಪತ್ರಕರ್ತನಿಗೆ ಲೇಖನಿಯೇ ಆಸ್ತಿ. ಲೇಖನಿ ಖಡ್ಗಕ್ಕಿಂತ ಹರಿತ. ಈ ಎಲ್ಲದರ ನಡುವೆ ಬಂಟ್ವಾಳದ ಪತ್ರಕರ್ತನೊಬ್ಬರು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಲೇಖನಿ ಮಾದರಿಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ.

img-20161115-wa0034

ಬಿ.ಸಿ.ರೋಡಿನ ಯುವ ಛಾಯಾಗ್ರಾಹಕ, ಪತ್ರಕರ್ತ ಕಿಶೋರ್ ಪೇರಾಜೆಯವರ ಲೇಖನಿ ಮಾದರಿಯ ವಿವಾಹ ಆಮಂತ್ರಣ ಅತ್ಯಾಕರ್ಷವಾಗಿ ಮೂಡಿ ಬಂದಿದೆ.

ಜಾಹೀರಾತು

ಕಂಪ್ಯೂಟರ್ ಯುಗದ ಪ್ರಸಕ್ತ ಕಾಲಗಟ್ಟದಲ್ಲಿ ಲೇಖನಿ ಮತ್ತು ಪತ್ರಕರ್ತರ ನಡುವಿನ ಅಂತರ ಹಚ್ಚುತಿದೆಯಾದರೂ ಇದು ಬಿಡಲಾಗದ ನಂಟು ಎಂಬುದನ್ನು ಈ ಆಮಂತ್ರಣ ಪತ್ರಿಕೆ ಸಾರಿ ಹೇಳುತ್ತಿದೆ.

ಛಾಯಾಗ್ರಾಹಕರಾಗಿ ವೃತ್ತಿ ಆರಂಭಿಸಿದ ಕಿಶೋರ್ ಪೇರಾಜೆ ಬಳಿಕ ಮಾಧ್ಯಮದ ಜೊತೆ ಬೆರೆತು ಮಾಧ್ಯಮ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡವರು. ತನ್ನ ವಿಹಾಹದ ಆಮಂತ್ರಣ ಪತ್ರಿಕೆಯಲ್ಲೂ ಇದನ್ನು ಸೊಗಸಾಗಿ ಉಲ್ಲೇಖಿಸಿದ್ದು ’ಕ್ಯಾಮರಾ ನನಗೆ ಬದುಕು ಕೊಟ್ಟಿದೆ… ಲೇಖನಿ ಆ ಬದುಕಲಿ ಗೌರವ ತಂದಿದೆ’ ಎಂಬ ಪದಗುಚ್ಚಗಳು ಅಹ್ವಾನಿತನನ್ನು ಆಕರ್ಷಿಸುತ್ತದೆ.

ದಿನಂಪ್ರತಿ ಅದೆಷ್ಟೋ ಆಮಂತ್ರಣಗಳು ನಮ್ಮ ನಿಮ್ಮ ಕೈ ಸೇರುತ್ತದೆ. ಕಾರ್ಯಕ್ರಮ ಮುಗಿದ ಬಳಿಕ ಅವು ಕಸವಾಗಿ ಬಿಡುತ್ತದೆ. ಆದರೆ ಕಿಶೋರ್ ಪೇರಾಜೆ ಅವರ ಮದುವೆಯ ವಿಶಿಷ್ಠ ಆಮಂತ್ರಣ ನೋಡಿದವರೆಲ್ಲ ಹೇಳುವ ಒಂದೇ ಮಾತು ಸಂಗ್ರಹ ಯೋಗ್ಯ ಆಮಂತ್ರಣವಾಗಿದೆ ಎಂಬುದು.

ಜಾಹೀರಾತು

ಆಮಂತ್ರಣ ಪಡೆದವರೆಲ್ಲ ಒಂದಾಷ್ಟು ಸಮಯ ಪತ್ರಿಕೆಯನ್ನು ತಿರುಗಿಸಿ ತಿರುಗಿಸಿ ನೋಡುವುದಿದೆ. ಬಳಿಕ ಸೂಪರ್ ಆಮಂತ್ರಣ, ಚೆನ್ನಾಗಿದೆ, ಪತ್ರಕರ್ತನಿಗೆ ಹೇಳಿದ ಆಮಂತ್ರಣ ಎಂದು ಹೇಳಿದ್ದೂ ಇದೆ. ಈ ತಿಂಗಳಲ್ಲಿ ಈ ವಿವಾಹ ನಡೆಯಲಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಲೇಖನಿ ಮಾದರಿ ಮದುವೆ ಆಮಂತ್ರಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*