ಜಾನುವಾರು ಅಕ್ರಮ ಸಾಗಾಟ ಪತ್ತೆ

ವಿಟ್ಲ: ಜಾನುವಾರು ಅಕ್ರಮ ಸಾಗಾಟದ ವಾಹನವೊಂದನ್ನು ವಿಟ್ಲ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ.

vil_16-nov_9

ಕಂಟೈನರ್ ಮೂಲಕ ಹಿಂಸಾತ್ಮಕವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುವ ಖಚಿತ ಮಾಹಿತಿ ಆಧಾರದಲ್ಲಿಸಾಲೆತ್ತೂರನಲ್ಲಿ ದಾಳಿ ನಡೆಸಿದ ವಿಟ್ಲ ಪೊಲೀಸರ ತಂಡ ಕಂಟೈನರ್ ಲಾರಿ ಸಹಿತ 9 ಎಮ್ಮೆ ಹಾಗೂ 7 ಎತ್ತುವನ್ನು ವಶಕ್ಕೆ ಪಡೆಯಿತು.

ಚಾಲಕ ನಂಜನಗೂಡು ಕಾವುಲೆಂದ ನಿವಾಸಿ ಫತಿಬ್ (28), ಬೇಲೂರು ಕೆಚ್ಚಬ್ಬಳ್ಳಿ ಹೆಸೂರು ನಿವಾಸಿ ರಹಿಮಾನ್ (38), ಕೊಪ್ಪಲು ಕಲ್ಲಾರೆ ಕಟಾಯ ನಿವಾಸಿ ಗೋಪಾಲ ಗೌಡ (53) ಬಂಧಿತರಾಗಿದ್ದಾರೆ. ಹಾಸನದ ರೈತರಿಂದ ಖರೀದಿಸಿದ ಜಾನುವಾರುಗಳನ್ನು ಕಾಸರಗೋಡಿನ ಕಸಾಯಿಖಾನೆಗೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು.

vil_16-nov_4

vil_16-nov_5 vil_16-nov_6ಕಂಟೈನರ್ ಒಳಗೆ ಕೈಕಾಲಿಗೆ ಹಾಗೂ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಲಾಗಿತ್ತು. ಇಳಿಸಿದಾಗ 8 ಎಮ್ಮೆ ಹಾಗೂ 7 ಹೋರಿ ಪತ್ತೆಯಾಗಿದೆ. ಜಾನುವಾರುಗಳಿಗೆ 80 ಸಾವಿರ ರೂ ಹಾಗೂ 4 ಲಕ್ಷ ರೂ ಕಂಟೈನರ್ ವಾಹನದ ಮೌಲ್ಯವೆಂದು ಅಂದಾಜಿಸಲಾಗಿದೆ. ಹಾಸನದಿಂದ ಬೋಳಂತೂರು ಮಾರ್ಗವಾಗಿ ಮಂಜೇಶ್ವರ ಮೂಲಕ ಕೇರಳ ಕಡೆಗೆ ಕಂಟೈನರ್ ಮೂಲಕ ಜಾನುವಾರುಗಳನ್ನು ಕೊಂಡೊಯ್ಯಲಾಗುತ್ತಿತ್ತು.

ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಸಹಾಯಕ ಉಪನಿರೀಕ್ಷಕ ರುಕ್ಮಯ ಮೂಲ್ಯ, ಪೊಲೀಸ್ ಸಿಬ್ಬಂದಿಗಳಾದ ಸೋಮಶೇಖರ್, ರಾಮಚಂದ್ರ, ಜಯಕುಮಾರ್, ಸಂಜೀವ, ಶ್ರೀಧರ್, ಲೋಕೇಶ್, ಪ್ರವೀಣ್ ಕುಮಾರ್, ಉಮೇಶ್, ಗೃಹರಕ್ಷಕದಳದ ಸಂಜೀವ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಜಾನುವಾರು ಅಕ್ರಮ ಸಾಗಾಟ ಪತ್ತೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*