Kalladka: ಫ್ಲೈಓವರ್ ತಳಭಾಗದಲ್ಲಿ ಮಣ್ಣಿನ ರಾಶಿ, ಕಲ್ಲಡ್ಕ ಕೆಸರುಮಯ, ರಸ್ತೆ ದಾಟಲೂ ಸಂಕಷ್ಟ

ಫ್ಲೈಓವರ್ ತಳಭಾಗದಲ್ಲಿ ಮಣ್ಣಿನ ರಾಶಿಯನ್ನೇ ಹಾಕಿದ ಪರಿಣಾಮ, ಕಲ್ಲಡ್ಕ ಪೇಟೆಯ ಜನರಿಗೆ ಒಂದು ಬದಿಯಿಂದ ಇನ್ನೊಂದು ಕಡೆ ಹೋಗಬೇಕಾದರೆ ಪ್ರಯಾಸಪಡಬೇಕಾದ ಸ್ತಿತಿ ಇದೆ.   ಪಾದ ಪೂರ್ತಿ ಕೆಸರಲ್ಲಿ ಹೂತುಹೋಗಿ, ಚಪ್ಪಲಿಯನ್ನು ಕೈಯಿಂದ ತೆಗೆದುಕೊಳ್ಳುವ ವೇಳೆ ಕೈ ಕೂಡ ಕೆಸರಾಗುವ ಸನ್ನಿವೇಶವೀಗ ಕಲ್ಲಡ್ಕದಲ್ಲಿ ಕಂಡುಬಂದಿದೆ.

ಕಲ್ಲಡ್ಕ ಫ್ಲೈಓವರ್ ಅಡಿಯಲ್ಲಿ ವಿಶಾಲವಾದ ಜಾಗವಿದ್ದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಲ್ಲಿ ಯಾವುದೇ ವಾಹನಗಳನ್ನೂ ನಿಲ್ಲಿಸಲು ಅವಕಾಶ ಮಾಡಿಲ್ಲ. ಬದಲಾಗಿ ಉದ್ದಕ್ಕೂ ಮಣ್ಣು ಹಾಕಿ, ಅದಕ್ಕೆ ವಾಹನಗಳು ಪ್ರವೇಶಿಸದಂತೆ ವ್ಯವಸ್ಥೆ ಮಾಡಿದೆ. ಇದೀಗ ಇಲ್ಲಿ ಹಾಕಿದ ಮಣ್ಣು ಹೊರಚೆಲ್ಲಿ, ರಸ್ತೆಯ ಮಧ್ಯಭಾಗಕ್ಕೆ ಬಂದಿದೆ. ಇದರಿಂದ ವಾಹನ ಸವಾರರೂ ಸಮಸ್ಯೆಗೊಳಗಾಗಿದ್ದು, ನಡೆದುಕೊಂಡು ಒಂದು ಬದಿಯಿಂದ ಇನ್ನೊಂದು ಕಡೆ ಹೋಗಲು ಸಾಧ್ಯವೇ ಆಗದ ಪರಿಸ್ಥಿತಿ ಇದೆ. ತಮ್ಮ ಎದುರುಬದಿಗೆ ಹೋಗಲು ಸುತ್ತುಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ, ಕಾಲೇಜುಗಳು ಇರುವ ಈ ಪರಿಸರದಲ್ಲಿ ಮಕ್ಕಳೂ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಜಾಹೀರಾತು

s a result of the pile of mud being placed at the bottom of the flyover, the people of Kalladka town are having a hard time moving from one side to the other. A situation has now been witnessed in Kalladka where their feet are completely buried in mud and even their hands get muddy when they take their slippers.PHOTO: VARUN KALLADKA

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "Kalladka: ಫ್ಲೈಓವರ್ ತಳಭಾಗದಲ್ಲಿ ಮಣ್ಣಿನ ರಾಶಿ, ಕಲ್ಲಡ್ಕ ಕೆಸರುಮಯ, ರಸ್ತೆ ದಾಟಲೂ ಸಂಕಷ್ಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*