ಸೋಮವಾರ ರಾತ್ರಿಯಿಂದೀಚೆಗೆ ಬಂಟ್ವಾಳ ತಾಲೂಕಿನ ಅಲ್ಲಲ್ಲಿ ಸುರಿದ ಮಳೆ ಹಾಗೂ ಗಾಳಿಗೆ ಹಲವೆಡೆ ಹಾನಿಗಳು ಉಂಟಾದ ಕುರಿತು ತಾಲೂಕು ಆಡಳಿತ ಮಾಹಿತಿ ನೀಡಿದೆ.
ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪ್ರವೀಣ್ ಆಳ್ವ ಎಂಬುವವರ ತೋಟದಲ್ಲಿದ್ದ ಮರವು ಗಾಳಿ ಮಳೆಗೆ ಅಡಿಕೆ ಮರಗಳ ಮೇಲೆ ಬಿದ್ದು ಸುಮಾರು 35 ಅಡಿಕೆ ಮರಗಳು ಹಾನಿಯಾಗಿರುತ್ತವೆ. ಪಾಣೆಮಂಗಳೂರು ಗ್ರಾಮದ ಗಿರಿಧರ ಕಾಮತ್ ಎಂಬವರ ರೈಸ್ ಮಿಲ್ ನ ಹಂಚು ಛಾವಣಿಗೆ ಮಳೆಗಾಳಿಯಿಂದ ಹಾನಿಯಾಗಿರುತ್ತದೆ. ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಕುಲ್ಸುಂಬಿ ಎಂಬುವವರ ವಾಸದ ಮನೆಯ ಹಿಂಬದಿಯ ಗೋಡೆ ಮನೆಯ ಸುಮಾರು 12 ಶೀಟುಗಳು ಗಾಳಿ ಮಳೆಗೆ ಹಾನಿಯಾಗಿರುತ್ತದೆ. ಪಾಣೆಮಂಗಳೂರು ಗ್ರಾಮದ ಶೇಖಬ್ಬ ರವರ ವಾಸ್ತವ್ಯದ ಮನೆಗೆ ಮಳೆ ಗಾಳಿಯಿಂದ ಆಂಶಿಕ ಹಾನಿಯಾಗಿರುತ್ತದೆ ಅದೇ ಗ್ರಾಮದ ವಸಂತಿ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿರುತ್ತದೆ ಪಾಣೆಮಂಗಳೂರು ಗ್ರಾಮದ ಹಾಮದ್ ಬಾವ ಮತ್ತು ಉಸ್ಮಾನ್ ಎಂಬವರ ವಾಸ್ತವ್ಯದ ಮನೆಗಳ ಹಂಚು ಛಾವಣಿಗೆ ಮಳೆಗಾಳಿಯಿಂದ ಹಾನಿಯಾಗಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
Be the first to comment on "ಗಾಳಿ, ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ"