ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಮಹಾಸಭೆ ಅಧ್ಯಕ್ಷ ಅರುಣ್ ರೋಶನ್ ಡಿಸೊಜ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕು ಈ ಬಾರಿ ಹೆಚ್ಚಿನ ವಸೂಲಾತಿ ಸಾಧಿಸಿದ್ದು 53.88 ಲಕ್ಷ ರೂ ಲಾಭ ಗಳಿಸಿದೆ. ತನ್ಮೂಲಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಕಾಸ್ಕಾರ್ಡ್ ಬ್ಯಾಂಕ್ ಬೆಂಗಳೂರು ಮಹಾಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ಕಾರಣರಾದ ರೈತ ಸದಸ್ಯರನ್ನು ಅಭಿನಂದಿಸಿದರು. ತಮ್ಮ ಸಹಕಾರದಿಂದ ಬ್ಯಾಂಕು ಇನ್ನೂ ಹೆಚ್ಚಿನ ಲಾಭ ಗಳಿಸಿ ಡಿವಿಡೆಂಡ್ ನೀಡುವಂತಾಗಲಿ ಎಂದು ಆಶಿಸಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಶೇಖರ ಬಂಗೇರ, ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ಸುದರ್ಶ್ರನ್ ಜೈನ್, ಲೋಲಾಕ್ಷಿ, ವಿಜಯಾನಂದ, ಲತಾ, ಸುಂದರ ಪೂಜಾರಿ, ರಾಜೇಶ್ ಕುಮಾರ್ ಮತ್ತು ಬ್ಯಾಂಕಿನ ವ್ಯವಸ್ಥಾಪಕರಾದ ಪದ್ಮನಾಭ. ಜಿ ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಬಂಟ್ವಾಳ ಎಲ್ಡಿ ಬ್ಯಾಂಕ್: 53.88 ಲಕ್ಷ ರೂ ಲಾಭ"