ಪ್ರದೀಪ್ ಬಡೆಕ್ಕಿಲ ನೇತೃತ್ವದಲ್ಲಿ ‘’ಸ್ವಾತಂತ್ರ್ಯದ ಧ್ವನಿ’’ – 76 ಧ್ವನಿಗಳ ಮೂಲಕ ವಿಶಿಷ್ಟ ಪ್ರಯತ್ನ

ಬಡೆಕ್ಕಿಲ ಪ್ರದೀಪ್

ಕಳೆದ 17 ವರ್ಷಗಳಿಂದ ಮಾಧ್ಯಮದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ಹಿನ್ನೆಲೆ ಧ್ವನಿಗೆ ರಾಜ್ಯಾದ್ಯಂತ ಮನೆಮಾತಾಗಿರುವ ಬಡೆಕ್ಕಿಲ ಪ್ರದೀಪ್ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯದ ಧ್ವನಿ ಕಾರ್ಯಕ್ರಮ ಮೂಡಿಬರಲಿದೆ.

ಜಾಹೀರಾತು

ಅವರ ರಿವರ್ಬ್ ಇಂಕ್, ಅನ್ನುವಸಂಸ್ಥೆ ಇದರ ನಿರ್ಮಾಣ ಮಾಡಿದರೆ, ಅವರೇ ನಡೆಸುತ್ತಿರುವ ನವೋನ್ನತಿ ಫೌಂಡೇಶನ್ ಅಡಿಯಲ್ಲಿ ಈ ಕಾರ್ಯಕ್ರಮ ಅನಾವರಣಗೊಳ್ಳುತ್ತಿದೆ.

ಭಾರತದ ಸ್ವಾತಂತ್ರ್ಯೋತ್ತರ 76 ವರ್ಷಗಳನ್ನು 76  ವಿವಿಧ  ಧ್ವನಿಗಳನ್ನುಬಳಸಿಕೊಂಡು ಸಂಚಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದ ಗೆಲುವಿನ ನಂತರ ಭಾರತ ಕಂಡ ಏರಿಳಿತದ ಪರಿಚಯ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬೇರೆ ಬೇರೆ ಮಂದಿ ಭಾರತದ ಕುರಿತು ಮಾತುಗಳನ್ನಾಡುತ್ತಾ ಸಾಗುವ ಈ ಕಾರ್ಯಕ್ರಮ ಸಮುದಾಯದ ಜೊತೆ ನಮ್ಮ ಸಂಬಂಧದ ಅನಾವರಣ ಇರಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ಜಾಹೀರಾತು

ನವೋನ್ನತಿ ಫೌಂಡೇಶನ್ ಮುಖಾಂತರ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಸಮುದಾಯದ ಜೊತೆ ಕನೆಕ್ಟ್ ಆಗುವ, ಕನ್ನಡದ 76 ಧ್ವನಿಗಳ ಮೂಲಕ ಭಾರತದ 76 ವರ್ಷಗಳ ಕಥೆಯನ್ನು ಹೇಳಲಿದ್ದಾರೆ. ಆಗಸ್ಟ್  15ರಂದು ರಾಜ್ಯದ ಹಲವು ಸಮುದಾಯ ಬಾನುಲಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ ಎಂದು ಪ್ರದೀಪ್ ಬಡೆಕ್ಕಿಲ ತಿಳಿಸಿದ್ದಾರೆ.

140 ಕೋಟಿ ಜನಸಂಖ್ಯೆಯ ನಮ್ಮ ದೇಶದ ಕಥೆಯನ್ನು ಇಪ್ಪತ್ತು ನಿಮಿಷದ ಈ ಕಾರ್ಯಕ್ರಮದಲ್ಲಿ ಹೇಳುವುದು ಅಸಾಧ್ಯವೇ ಆದರೂ, ನಮ್ಮಮಾತುಗಳಲ್ಲಿ ಅದರ ಅವಲೋಕನ ಮಾಡಿದರೆ, ಅದು ನಮ್ಮೊಳಗೆ ದೇಶಭಕ್ತಿಯ ಬೆಳಕನ್ನು ಹಚ್ಚುತ್ತದೆ ಅನ್ನುವುದು ನಮ್ಮ ನಂಬಿಕೆ. ನವೋನ್ನತಿ ಫೌಂಡೇಶನ್, ಭಾರತದ ಸಂಸ್ಕೃತಿ, ಇತಿಹಾಸ ಹಾಗೂ ಭಾರತೀಯತೆಯ ಕುರಿತು ಕಾರ್ಯಕ್ರಮಗಳನ್ನು ಮಾಡುವ ಹಾಗೂ ಕೆಲಸಗಳನ್ನು ಮಾಡುವ ಉದ್ದೇಶದಿಂದ ಹುಟ್ಟಿದ ಸಂಸ್ಥೆಯಾಗಿದ್ದು, ಈ ಕಾರ್ಯಕ್ರಮವನ್ನೂ ಕೂಡ ಬಡೆಕ್ಕಿಲ ಪ್ರದೀಪ್ ಅವರು ಧ್ವನಿಯ ಮೂಲಕ ತನಗೆ ಸಿಕ್ಕ ಪ್ರೀತಿಯನ್ನು ಧ್ವನಿಯ ಕಾರ್ಯಕ್ರಮದ ಮೂಲಕವೇ ಜನರಿಗೆ ಮರುಹಂಚುವ ಕಿಂಚಿತ್ ಪ್ರಯತ್ನ ಇದು ಎಂದವರು ಮಾಹಿತಿ ನೀಡಿದರು.

ಜಾಹೀರಾತು

ಜೊತೆಗೆ ರಾಜ್ಯದ ಹಲವು ಕಾಲೇಜುಗಳ ಮಾಧ್ಯಮ ವಿದ್ಯಾರ್ಥಿಗಳನ್ನೂ  ಈ ಕೆಲಸದಲ್ಲಿತೊಡಗಿಸಿಕೊಳ್ಳಲಾಗಿದೆ. ಪ್ರದೀಪ್ ಅವರ ತಂಡದ ಶರಧಿ ಆರ್ ಫಡ್ಕೆ ಅಲ್ಲದೇ ದೊಡ್ಡದೊಂದು ತಂಡ 20ರಿಂದ 30 ನಿಮಿಷದೊಳಗಿನ ಈ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಿದೆ ಎಂದು ಬಡೆಕ್ಕಿಲ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪ್ರದೀಪ್ ಬಡೆಕ್ಕಿಲ ನೇತೃತ್ವದಲ್ಲಿ ‘’ಸ್ವಾತಂತ್ರ್ಯದ ಧ್ವನಿ’’ – 76 ಧ್ವನಿಗಳ ಮೂಲಕ ವಿಶಿಷ್ಟ ಪ್ರಯತ್ನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*