ಜಾಹೀರಾತು
ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುವ ಜಾಗದ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ರಸ್ತೆಗಳು ಅಕ್ಷರಶಃ ನಾಶವಾಗಿದೆ. ಬಿ.ಸಿ.ರೋಡ್ ಅಡ್ಡಹೊಳೆ ಮಾರ್ಗದಲ್ಲಿ ಬಿ.ಸಿ.ರೋಡ್ ನಿಂದ ಪಾಣೆಮಂಗಳೂರು ಸರ್ವೀಸ್ ರೋಡ್ ಆರಂಭದಲ್ಲೇ ಹೊಂಡ ಕಾಣಿಸುತ್ತದೆ. ಮೆಲ್ಕಾರ್ ತಲುಪುವ ಹೊತ್ತಿಗೆ ಅಲ್ಲಲ್ಲಿ ಹೊಂಡಗಳು ಗೋಚರಿಸುತ್ತವೆ. ಮೆಲ್ಕಾರ್ ನಿಂದ ಮುಂದಕ್ಕೆ ಹೋದಾಗ, ಕಲ್ಲಡ್ಕ ಪೇಟೆಯಲ್ಲಿ ಇಡೀ ರಸ್ತೆಯೇ ನಾಶವಾಗಿದೆ. ಅಲ್ಲಿಂದ ಪೂರ್ಲಿಪ್ಪಾಡಿ ತಲುಪುವ ವೇಳೆ ಹೊಂಡಗಳ ಸಾಮ್ರಾಜ್ಯ. ಮಾಣಿ ಜಂಕ್ಷನ್ ತಲುಪುವ ಹೊತ್ತಿಗೇ ಮತ್ತೆ ಸಮಸ್ಯೆಗಳು. ಇನ್ನು ಮೆಲ್ಕಾರ್, ಪಾಣೆಮಂಗಳೂರು, ಮಾಣಿಯ ಅಂಡರ್ ಪಾಸ್ ಗಳು ನರಕದ ಇನ್ನೊಂದು ರೂಪಗಳಾಗಿವೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಾಲ್ಕು ದಿನದ ಮಳೆಗೇ ಪ್ರಾಣ ಬಿಟ್ಟ ಡಾಂಬರು – ಕೆರೆಗಾತ್ರದ ಹೊಂಡ ನಿರ್ಮಾಣ, ವಾಹನ ಸವಾರರೇ ಎಚ್ಚರ!!"