‘ಮನೆಯಂಗಳದಲ್ಲಿ ಮಾನವ ಗ್ರಂಥಾಲಯ’- ಮೂರನೇ ಓದು: ಜೀವನಕಥನ ಪ್ರಸ್ತುತಪಡಿಸಿದರು ಶಿವಪ್ರಸಾದ್ ಆಳ್ವ ನಡಿಗುತ್ತು

ಇಬ್ರಾಹಿಂ ನಡುಪದವು ಮನೆಯಂಗಳದಲ್ಲಿ ಕಾರ್ಯಕ್ರಮ

ಮನೋಸ್ಥೈರ್ಯ ಮತ್ತು ಸಕಾಲಿಕ ಚಿಕಿತ್ಸೆಯಿಂದ ಮಾರಕ ರೋಗ ಕ್ಯಾನ್ಸರನ್ನು ಗೆಲ್ಲಬಹುದೆಂದು ಸ್ವತಃ ಕ್ಯಾನ್ಸರನ್ನು ಎದುರಿಸಿ ಗೆದ್ದ ಶಿವಪ್ರಸಾದ್ ಆಳ್ವ ನಡಿಗುತ್ತು ಹೇಳಿದ್ದಾರೆ.

ಜನಶಿಕ್ಷಣ ಟ್ರಸ್ಟ್, ಜನಜೀವನ ಬಾಳೆಪುಣಿ, ಚಿತ್ತಾರ ಬಳಗ, ಸ್ಮೈಲ್ ಟ್ರಸ್ಟ್ ಹಾಗೂ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಇಬ್ರಾಹಿಂ ನಡುಪದವು ಮನೆಯಂಗಳದಲ್ಲಿ ನಡೆದ ಮಾನವ ಗ್ರಂಥಾಲಯ ದಲ್ಲಿ ಅವರು ಮನುಷ್ಯ ಪುಸ್ತಕವಾಗಿ ತನ್ನ ಜೀವನ ಕಥನವನ್ನು ನಿರೂಪಿಸಿದರು.

ಜಾಹೀರಾತು

ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತಾಯಿ, ಶಿಕ್ಷಕರ ಮತ್ತು ಸ್ನೇಹಿತರ ಮಾತು ಮತ್ತು ಮಾರ್ಗದರ್ಶನದಿಂದ ಪರಿವರ್ತನೆಗೊಂಡು ಉದ್ಯಮಿಯಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ, ಪ್ರಗತಿಪರ ಚಿಂತಕರಾಗಿ ಹೊಸ ಬದುಕನ್ನು ಕಟ್ಟಿದ ರೀತಿಯನ್ನು ಅವರು ಆಸಕ್ತ ‘ಮನುಷ್ಯ ಪುಸ್ತಕ’ ಓದುಗರ ಜತೆ ಹಂಚಿಕೊಂಡರು.

ಜನಜೀವನ ಬಾಳೆಪುಣಿ ಇದರ ಅಧ್ಯಕ್ಷ ರಮೇಶ ಶೇಣವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಿದ್ದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಜೀವನ ಕಥನಕ್ಕೆ ಪ್ರತಿಕ್ರಿಯಿಸಿ ಆಳ್ವರು ಕೇಳುಗರನ್ನು ಹೊಸ ಚಿಂತನೆಗೆ ಕರೆದೊಯ್ದಿದ್ದಾರೆ ಎಂದರು. ಚಂದ್ರಶೇಖರ ಪಾತೂರು ಪುಸ್ತಕ ವನ್ನು ಪರಿಚಯಿಸಿದರು. ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಹೈದರ್ ಕೈರಂಗಳ ವಂದಿಸಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಒಂಬಡ್ಸ್ ಮೆನ್ ಶೀನ ಶೆಟ್ಟಿ, ರಾಧಾಕೃಷ್ಣ ರೈ ಉಮಿಯ, ಪುಂಡರೀಕಾಕ್ಷ, ಚಂದ್ರಹಾಸ ಕಣಂತೂರು, ಕೆ.ಶ್ಯಾಮ್ ಭಟ್,ಸತೀಶ್ ಇರಾ, ಸ್ಥಳೀಯ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಸೇವಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುವಪ್ಪ ಎನ್.ಟಿ ಬಾಳೆಪುಣಿ ಇವರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "‘ಮನೆಯಂಗಳದಲ್ಲಿ ಮಾನವ ಗ್ರಂಥಾಲಯ’- ಮೂರನೇ ಓದು: ಜೀವನಕಥನ ಪ್ರಸ್ತುತಪಡಿಸಿದರು ಶಿವಪ್ರಸಾದ್ ಆಳ್ವ ನಡಿಗುತ್ತು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*