ಬಂಟ್ವಾಳದಲ್ಲಿ ಚೂರಿ ಇರಿತ ಪ್ರಕರಣ: ಇಬ್ಬರು ಅರೆಸ್ಟ್

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಗಲಾಟೆ ಮಾಡಿಕೊಂಡು ಬಂಟ್ವಾಳ ಬೈಪಾಸ್ ನಲ್ಲಿ ನಿಂತಿದ್ದ ತಂಡವೊಂದಕ್ಕೆ ಸಮಾಧಾನಪಡಿಸಲು ಹೋದ ಇಬ್ಬರ ಮೇಲೆ ಚೂರಿಯಿಂದ ಇರಿದ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರನ್ನು ಶುಕ್ರವಾರ ಬಂಧಿಸಿದೆ. ಘಟನೆ ಬುಧವಾರ ರಾತ್ರಿ ನಡೆದಿದ್ದು, ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸ್ ಉಪಾಧೀಕ್ಷಕ ಪ್ರತಾಪ ಸಿಂಗ್ ತೋರಾಟ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರಚಿಸಿದ್ದು ಶುಕ್ರವಾರ ಆರೋಪಿಗಳಾದ ಕಾವಳಮುಡೂರಿನ ಪುರುಷೋತ್ತಮ (27), ಮತ್ತು  ಬಿ.ಕಸ್ಬಾ ಗ್ರಾಮದ ಧನಂಜಯ ಯಾನೆ ಧನುಷ (19)ರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಸಚಿನ್ ಅರಬಿ ಗುಡ್ಡೆ ಮತ್ತು ಸುಜಿತ್  ಪತ್ತೆಗೆ ಬಂಟ್ವಾಳ ನಗರ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದೆ.

ಅಮ್ಟಾಡಿ ಗ್ರಾಮದ  ಕಿನ್ನಿಬೆಟ್ಟು ನಿವಾಸಿ ದಯಾನಂದ ಹಾಗೂ ಕಿಶೋರ್  ಅವರು ಚೂರಿ ಇರಿತಕ್ಕೊಳಗಾಗಿದ್ದು,ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬಂಟ್ವಾಳ ಬೈಪಾಸ್ ನ ಕಟ್ಟಡವೊಂದರ ಕೆಳಭಾಗದಲ್ಲಿರುವ ಹೋಟೆಲ್ ಮುಂದೆ ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಸುಜಿತ್, ಸಚಿನ್, ಧನು ಹಾಗೂ ಪುರುಷೋತ್ತಮ್ ಯಾವುದೇ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು, ಈ ಸಂದರ್ಭ ಅವರನ್ನು ಸಮಾಧಾನ ಪಡಿಸಿದಾಗ ಸಿಟ್ಟುಗೊಂಡ ಸುಜಿತ್, ಆತನಲ್ಲಿದ್ದ ಚೂರಿಯಿಂದ ಏಕಾಏಕಿ ಹೊಟ್ಟೆಗೆ ಇರಿದಿದ್ದಾನೆ. ಇದೇ ವೇಳೆ, ಬಿಡಿಸಲು ಬಂದ ಕಿಶೋರ್ ಎಂಬಾತನಿಗೂ ಸುಜಿತ್ ಅದೇ ಚೂರಿಯಿಂದ ಬೆನ್ನಿಗೆ ಇರಿದಿದ್ದು,ಸುಜಿತನ ಜೊತೆಗಿದ್ದ ಸಚಿನ, ಧನು ಮತ್ತು ಪುರುಷೋತ್ತಮ್ ರವರು ಸುಜಿತನ ಬೆಂಬಲಕ್ಕೆ ನಿಂತಿದ್ದಾಗಿ ಆಪಾದಿಸಲಾಗಿದೆ.ತಕರಾರು ನಡೆಯುವ ಸಮಯ ಬಿಡಿಸಲು ಹೋಗಿದ್ದು, ಆ ಸಮಯ ಸುಜಿತನಿಗೆ ಯಾರೋ ಬಾಟ್ಲಿಯಿಂದ ಹೊಡೆದಿದ್ದು, ಅವನಿಗೆ ದಯಾನಂದನೇ ಬಾಟ್ಲಿಯಿಂದ ಹೊಡೆದಿದ್ದು ಎಂಬ ಅನುಮಾನದಿಂದ ಚೂರಿಯಿಂದ ಇರಿದು ಈ ರೀತಿ ಕೃತ್ಯವೆಸಗಿದ್ದಾಗಿ ದೂರು ದಾಖಲಾಗಿತ್ತು.

ಜಾಹೀರಾತು

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳದಲ್ಲಿ ಚೂರಿ ಇರಿತ ಪ್ರಕರಣ: ಇಬ್ಬರು ಅರೆಸ್ಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*