ಬಂಟ್ವಾಳ: ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಉಸ್ತುವಾರಿ ನಡೆಸುತ್ತಿರುವ ಖಾಸಗಿ ಸಂಸ್ಥೆಯೊಂದರ ಅಧಿಕಾರಿಗಳು ಬಂಟ್ವಾಳದ ಪರಿಸರದಲ್ಲಿ ಜಮೀನು ಸರ್ವೆಗೆ ಆಗಮಿಸಿದ ಸಂದರ್ಭ ಸ್ಥಳೀಯ ಕೃಷಿಕರು ತೀವ್ರ ವಿರೋಧವನ್ನು ಬಂಟ್ವಾಳ ರೈತ ಹೋರಾಟ ಸಮಿತಿ ಮೂಲಕ ವ್ಯಕ್ತಪಡಿಸಿತು.
ಡಿಸಿ, ಪಿಡಿಒ ಅವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಖಾಸಗಿ ಸಂಸ್ಥೆ ಅಧಿಕಾರಿಗಳು ಏಕಾಏಕಿ ನಮ್ಮ ಜಮೀನಿಗೆ ಆಗಮಿಸುವುದು ಸರಿಯಲ್ಲ ಎಂದು ರೈತರು ದೂರಿದರು.
ಹತ್ತು ಸೆಂಟ್ಸ್ ಜಾಗದ ಗಡಿ ಗುರುತು ಮಾಡಲು ಕಂದಾಯ ಇಲಾಖೆಯ ಸರ್ವೇಯರ್ ಗಳಿಗೆ ಹತ್ತು ನೋಟಿಸ್ ನೀಡಬೇಕಾಗುತ್ತದೆ. ಆದರೆ ಕಂಪನಿ ಪರವಾಗಿ ಸರ್ವೇ ಕಾರ್ಯಕ್ಕೆ ಬೆರಳೆಣಿಕೆಯ ದಿನದಲ್ಲೇ ಆಗಮಿಸಿದ್ದಾರೆ.ಎಂದರು.
ಜಾಹೀರಾತು
ಈಗಾಗಲೇ ರೈತರ ಬಳಿ ಇರುವ ನಕ್ಷೆಗಳು ಸೂಕ್ತವಾಗಿರುವುದಲ್ಲ. ಈಗ ಜಿಪಿಎಸ್ ಮೂಲಕ ಸಿದ್ದಪಡಿಸಿದ ನಕ್ಷೆಗಿಂತ ೬ಮೀಟರ್ ಸ್ಥಳ ಬದಲಾವಣೆಯಾಗುವ ಸಾಧ್ಯವಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿಲುವು ತಿಳಿಸುತ್ತೇವೆ. ಸಮಸ್ಯೆ ಬಗೆ ಬರಿದ ಬಳಿಕ ಸರ್ವೇ ಕಾರ್ಯ ನಡೆಸುವುದಾಗಿ ಹೇಳಿ ಬಂದವರು ತೆರಳಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಜಮೀನು ಸರ್ವೆಗೆ ವಿರೋಧ ವ್ಯಕ್ತಪಡಿಸಿದ ಕೃಷಿಕರು"
Be the first to comment on "ಜಮೀನು ಸರ್ವೆಗೆ ವಿರೋಧ ವ್ಯಕ್ತಪಡಿಸಿದ ಕೃಷಿಕರು"