ಬಂಟ್ವಾಳ: ಆಟಿ (ಆಷಾಢ) ಅಮಾವಾಸ್ಯೆ ಹಿನ್ನೆಲೆಯಲ್ಲಿ ತುಳುಕೂಟ ಬಂಟ್ವಾಳದಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಹಯೋಗ, ಸಹಕಾರ ದಲ್ಲಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಸುಕಿನ ವೇಳೆ ಸಾರ್ವಜನಿಕರಿಗೆ ಪಾಲೆ (ಹಾಳೆ) ಮರದ ಕೆತ್ತೆ (ತೊಗಟೆ) ಕಷಾಯವನ್ನು ವಿತರಿಸಲಾಯಿತು. ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಈ ಕಷಾಯವನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು ಎಂಬ ನಂಬಿಕೆ ಇರುವ ಕಾರಣ ಕರಾವಳಿಯಲ್ಲಿ ಇದನ್ನು ಸೇವಿಸುವ ಪರಿಪಾಠ ಇದೆ. ತುಳುಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಕಷಾಯ ವಿತರಣೆ ಮಾಡಿ ಚಾಲನೆ ನೀಡಿದರು.ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ್ ಜೈನ್, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ಕಾರ್ಯದರ್ಶಿ ಶಿವಶಂಕರ್ ಎನ್, ಪ್ರಮುಖರಾದ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ರಮೇಶ ನಾಯಕ್ ರಾಯಿ, ಎಚ್ಕೆ ನಯನಾಡು, ಶೇಷಪ್ಪ ಮಾಸ್ಟರ್, ನಾರಾಯಣ ಸಿ. ಪೆರ್ನೆ, ಸುಕುಮಾರ್ ಬಂಟ್ವಾಳ, ಪ್ರಕಾಶ ಶೆಟ್ಟಿ ತುಂಬೆ, ಸತೀಶ ಕುಮಾರ ಕಾರ್ತಿಕ್, ಹರೀಶ್ ಬಿ.ಸಿ.ರೋಡ್, ದಾಮೊದರ್ ಏರ್ಯ, ಜಯಾನಂದ ಪೆರಾಜೆ, ಜತಿನ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ತುಳುಕೂಟದಿಂದ ತುಳುನಾಡ ಸಂಪ್ರದಾಯದ ಪಾಲೆ ಮರದ ತೊಗಟೆ ಕಷಾಯ ವಿತರಣೆ
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ತುಳುಕೂಟದಿಂದ ತುಳುನಾಡ ಸಂಪ್ರದಾಯದ ಪಾಲೆ ಮರದ ತೊಗಟೆ ಕಷಾಯ ವಿತರಣೆ"