ಬಂಟ್ವಾಳ: ಬಂಟ್ವಾಳದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ನಾವೂ ಬದುಕಬೇಕು ಎಂಬ ಆಂದೋಲನವನ್ನು ನಡೆಸಲಾಯಿತು. ಸರ್ವ ಪಕ್ಷ ಮತ್ತು ಸಂಘಟನೆಗಳು ಕರೆ ನೀಡಿರುವ ಜನಾಗ್ರಹ ಆಂದೋಲನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಬಿ.ಸಿ ರೋಡು ತಲಪಾಡಿ ಘಟಕದ ವತಿಯಿಂದ ಬೆಂಬಲ ವ್ಯಕ್ತಪಡಿಸುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನಾ ಕಾರರು ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ತಲಪಾಡಿ ಘಟಕ ಅಧ್ಯಕ್ಷ ಶಾಹುಲ್ ತಲಪಾಡಿ, ಪಾಪ್ಯುಲರ್ ಫ್ರಂಟ್ ಬಿ.ಸಿರೋಡು ಅಧ್ಯಕ್ಷ ಶರೀಫ್ ವಳವೂರು, ಅಕ್ಬರ್ ಅಲಿ ಪೊನ್ನೋಡಿ, ಅಶ್ರಫ್ ಬಿ.ಎಮ್.ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎಸ್.ಡಿ.ಪಿ.ಐ.ನಿಂದ ಬಂಟ್ವಾಳದಲ್ಲಿ ‘ನಾವೂ ಬದುಕಬೇಕು’ ಆಂದೋಲನ"