ಬಂಟ್ವಾಳ: ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಸರೆ ಬಳಗದಿಂದ ಹಕ್ಕಿಗಳಿಗೆ ಆಹಾರ ತಟ್ಟೆಯನ್ನು ವಿತರಿಸಲಾಯಿತು. ಆಹಾರ ನೀರಿಗಾಗಿ ಪರಿತಪಿಸುವ ಪುಟ್ಟ ಪುಟ್ಟ ಪಕ್ಷಿಗಳಿಗೆ ಕಾಳು, ನೀರು ನೀಡಿ ರಕ್ಷಿಸುವ ಉದ್ದೇಶದಿಂದ ಆಸರೆ ಗೆಳೆಯರ ಬಳಗ ಈ ಯೋಜನೆ ನಡೆಸುತ್ತಿದೆ. ಬಂಟ್ವಾಳ ವಲಯ ಆರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯಅರಣ್ಯ ಅಧಿಕಾರಿ ಪ್ರೀತಮ್ ಎಸ್ ಸಮಕ್ಷಮದಲ್ಲಿ ಆರಣ್ಯ ಇಲಾಖೆಗೆ ಆಹಾರ ತಟ್ಟೆ ನೀಡಲಾಯಿತು ಈ ಸಂದರ್ಭ ಜಗದೀಶ್ ನೆತ್ತರಕೆರೆ, ಆಸರೆ ಗೆಳೆಯರ ಬಳಗದ ಸ್ಥಾಪಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ತಂಡದ ಸಲಹೆಗಾರರಾದ ರಮೇಶ್ ಕುಲಾಲ್ ವಗ್ಗ, ಸದಸ್ಯರು ರಿತೇಶ್ ಕುಲಾಲ್ ಬಜ್ಪೆ, ಶುಭಕರ್ ಕುಲಾಲ್ ಕವತ್ತಾರು, ಅರುಣ್ ಕುಲಾಲ್ ಮೂಳೂರು, ಸಂತೋಷ್ ಕುಲಾಲ್ ಪದವು ಕಾರ್ಕಳ, ಸತೀಶ್ ಕಜ್ಜೋಡಿ, ವೆಂಕಟೇಶ್ ಪೂಜಾರಿ ಬಿ.ಸಿ. ರೋಡ್, ನವೀನ್ ಬಿ. ಸಿ. ರೋಡ್ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿಗೆ ಆಸರೆ ಬಳಗದಿಂದ ಹಕ್ಕಿಗಳಿಗೆ ಆಹಾರ ತಟ್ಟೆ ವಿತರಣೆ"