ಶಿಕ್ಷಕರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ – ಇದು ವಿದ್ಯಾಗಮದ ವಿಶೇಷ

ಜಾಹೀರಾತು

ವಿದ್ಯಾಗಮ ಯೋಜನೆಯನ್ವಯ ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ನಿಂತ ನೀರಾಗದಂತೆ ನೋಡಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಜಾಹೀರಾತು

ಪ್ರಸ್ತುತ ವಿದ್ಯಾರ್ಥಿಗಳ ತರಗತಿವಾರು ಗುಂಪು ಮಾಡಿ ವಾಟ್ಸಪ್ ನಲ್ಲಿ ಕಲಿಕಾ ಸಾಮಗ್ರಿಗಳ ಚಟುವಟಿಕೆ ವಿಡಿಯೋಗಳನ್ನುಕಳುಹಿಸಿದರೂ ಕೂಡ ಅದು ನಿರಂತರವಾಗಿ ಮಕ್ಕಳನ್ನು ತಲುಪುತ್ತಿದೆಯೇ ಇಲ್ಲವೇ ಎಂದು ವಿದ್ಯಾಗಮದ ಮೂಲಕ ನೋಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಒಮ್ಮೆ ಸೇರುವಾಗ ವಿದ್ಯಾರ್ಥಿಗಳ ಕಲಿಕಾ ಸಂದೇಹಗಳನ್ನು ಪರಿಹರಿಸಲು ಕಲಿಕಾ ಚಟುವಟಿಕೆ ನೀಡಲು ಸಹಾಯವಾಗುತ್ತಿದೆ. ಡಿಡಿ ಚಂದನ ದಲ್ಲಿ ಬರುವ ಸಂವೇಗ ಕಾರ್ಯಕ್ರಮದಲ್ಲಿ ಬರುವ ಪಾಠಕ್ಕೆ ಪೂರಕವಾದ ಚಟುವಟಿಕೆಗಳನ್ನು ಅಭ್ಯಾಸ ಹಾಳೆ ಮೂಲಕ ನೀಡಲಾಗುತ್ತಿದೆ ಹಾಗೂ ಮುಂದಿನ ಭೇಟಿಯು ವಿದ್ಯಾರ್ಥಿಗಳಿಂದ ಅಭ್ಯಾಸ ಹಾಳೆಗಳನ್ನು ಪಡೆದು, ಪರಿಶೀಲಿಸಿ ಮೌಲ್ಯಮಾಪನ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ಸಿಗುವುದು. ಮೊಬೈಲ್ ಇಲ್ಲದ ವಿದ್ಯಾರ್ಥಿಗಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ಸುಲಭ ಸಾಧ್ಯ .ಶಿಕ್ಷಕರು ವಿದ್ಯಾರ್ಥಿಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಭೇಟಿ ಮಾಡುವುದರಿಂದ ಪ್ರತಿಯೊಂದು ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿ ಕಲಿಕಾ ಕೊರತೆಯನ್ನು ನೀಗಿಸಲು ಅನುಕೂಲವಾಗುವುದು .ಕನಿಷ್ಠ ಕಲಿಕಾ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿದ್ಯಾಗಮದಿಂದ ಸಾಧ್ಯ. ಸ್ಥಳೀಯ ಸಂಘ ಸಂಸ್ಥೆ , ವಿದ್ಯಾಭಿಮಾನಿ ಸ್ಥಳೀಯರು ಹಾಗೂ ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸುವ ಅಗತ್ಯ ಇಲ್ಲಿದೆ.

ಪೊಳಲಿಯಲ್ಲಿ: ಪೊಳಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯಿತು. ಇಲ್ಲಿ 250 ಮಕ್ಕಳಿದ್ದು, ಅವರನ್ನು ವಿದ್ಯಾಗಮ ಮೂಲಕ ತಲುಪುವ ಸಲುವಾಗಿ ರೂಪುರೇಷೆಗಳು ನಡೆದವು. ಪೊಳಲಿ, ಕರಿಯಂಗಳ ಪಲ್ಲಿಪಾಡಿ, ಬಡಗಬೆಳ್ಳೂರು ,ತೆಂಕಬೆಳ್ಳೂರು ,ಬಡಕಬೈಲು, ಅಮ್ಮುಂಜೆ ನಾಣೂರ ಪದವು, ಅಡ್ಡೂರು ಎಂಬ ಹತ್ತು ಜನವಸತಿ ಪ್ರದೇಶಗಳನ್ನು ಗುರುತಿಸಲಾಯಿತು .ಶಾಲೆಯ ವಿದ್ಯಾರ್ಥಿಗಳಲ್ಲಿ ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರ ಹಾಗೂ ಹೊಂದಿಲ್ಲದವರಮತ್ತು ಟಿವಿ ಇರುವವರ ಹಾಗೂ ಟಿವಿ ಇಲ್ಲದವರ ದತ್ತಾಂಶಗಳನ್ನು ಸಂಗ್ರಹಿಸಲಾಯಿತು. ಶಾಲೆಯ ಹತ್ತು ಶಿಕ್ಷಕರು 5 ಶಿಕ್ಷಕರ ಎರಡು ತಂಡಗಳನ್ನು ಮಾಡಿ ದಿನಕ್ಕೊಂದು ಜನವಸತಿ ಪ್ರದೇಶಕ್ಕೆ ಭೇಟಿ ನೀಡುವುದಾಗಿ ನಿರ್ಧರಿಸಲಾಯಿತು.

ಅಮ್ಮುಂಜೆಯಲ್ಲಿ ಗ್ರಾಮಪಂಚಾಯತ್ ಸಭಾಭವನದಲ್ಲಿ, ಕರಿಯಂಗಳ ದಲ್ಲಿ ಮಾಜಿ ಅಧ್ಯಕ್ಷರ ಮನೆಯ ತಾರಸಿಯಲ್ಲಿ, ತೆಂಕಬೆಳ್ಳೂರು ಚರ್ಚ್ ಆವರಣದಲ್ಲಿ, ಬಡಕಬೈಲ್ ನಲ್ಲಿ ಒಬ್ಬ ಸ್ಥಳೀಯವಿದ್ಯಾಭಿಮಾನಿ ಅವರ ಮನೆಯ ತಾರಸಿಯಲ್ಲಿ,  ಬಡಗಬೆಳ್ಳೂರಿನಲ್ಲಿ ಆದಿಶಕ್ತಿ ಚಾಮುಂಡಿ ದೇವಸ್ಥಾನದ ಸಭಾಭವನದಲ್ಲಿ,  ಪೊಳಲಿಯಲ್ಲಿ ಸರ್ವಮಂಗಳ ಸಭಾ ಭವನದ ಆವರಣದಲ್ಲಿ ವಿದ್ಯಾಗಮನ ನಡೆಸಲಾಗುತ್ತಿದೆ.

ಜಾಹೀರಾತು

ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವೀರಕಂಬ ಗ್ರಾಮ ವ್ಯಾಪ್ತಿಯ ವಿವಿಧೆಡೆ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾತೃಶ್ರೀ ಗೆಳೆಯರ ಬಳಗ ವೀರಕಂಭ ದಲ್ಲಿ ಕಲ್ಲಡ್ಕ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಮೆಟಿಲ್ಡಾ ಲೋಬೊ ನೆರವೇರಿಸಿದರು.ಮುಖ್ಯಶಿಕ್ಷಕ ನಾರಾಯಣ ಪೂಜಾರಿ ವಿದ್ಯಾಗಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ಗುಡ್ಡೆತೋಟ ,ಸಿಂಗೇರಿ, ಗಿಳ್ಕಿಂಜ, ನಂದಂತಿಮಾರು, ಪ್ರದೇಶದ ಮಕ್ಕಳಿಗೆ ,ಶಿಕ್ಷಕಿ ಶಕುಂತಲಳಾ. ಎಂ .ಬಿ. ಕಂಪದ ಬೈಲು, ಕೋಡಪದವು, ತಾಳಿತ್ತನೂಜಿ ,ಮಜಿ, ಮಜ್ಜೋನಿ ಪ್ರದೇಶದ ಮಕ್ಕಳಿಗೆ,  ಶಿಕ್ಷಕಿ ಸಿಸಿಲಿಯ, ಎಮೆ೯ಮಜಲು ,ನಕ್ಕರಾಜೆ , ಗಣೇಶ್ ಕೊಡಿ, ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಸಂಗೀತ ಶರ್ಮ, ಬಾಯಿಲ ಅರೆಬೆಟ್ಟು ,ಮಜಿ ಬೆತ್ತ ಸರವು, ಕೆಮ್ಮ ಟೆ, ಕುಮೇರು,ವೀರಕಂಬ, ಕೇಪುಳ ಕೊಡಿ , ವ್ಯಾಪ್ತಿಯ ಮಕ್ಕಳಿಗೆ , ಶಿಕ್ಷಕಿ ಅನುಷಾ, ಕೆಲಿಂಜ, ಪೆಲತ್ತಡ್ಕ ,ಬೆಂಜನತಿಮಾರು, ಪಾತ್ರ ತೋಟ, ಮಂಗಿಲಪದವು ಮಕ್ಕಳಿಗೆ ಶಿಕ್ಷಕಿ ಮುರ್ಷೀದಾ ಬಾನು ,ಮೈರ ,ಕೊಂಬಿಲ , ಅನಂತಾಡಿ ,ಚಾಕೊಟೆ ಮಾರು , ವ್ಯಾಪ್ತಿಯ ಮಕ್ಕಳಿಗೆ, ಹಾಗೂ ಅತಿಥಿ ಶಿಕ್ಷಕಿಯರಾದ ಜಯಲಕ್ಷ್ಮಿ ಹಾಗೂ ಶ್ವೇತಾ ಎಲ್ಲಾ ಶಿಕ್ಷಕರ ಜೊತೆ ಸೇರಿಕೊಂಡು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಪಡುತ್ತಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶಿಕ್ಷಕರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ – ಇದು ವಿದ್ಯಾಗಮದ ವಿಶೇಷ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*