ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಅಪಘಾತದ ಸರಣಿ, ಬಾಯ್ದೆರೆದ ಹೊಂಡಗಳು, ರಸ್ತೆಗುರುಳುವ ಮರಗಳು

  • ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್

ವೇಗವಾಗಿ ರಾಂಗ್ ಸೈಡ್ ನಲ್ಲಿ ಚಲಿಸಿ ಅಪಘಾತಗಳು ಸಂಭವಿಸುವುದು ಚಾಲಕನ ಅಜಾಗರೂಕತೆಯಿಂದ ಸಂಭವಿಸುತ್ತದೆ. ಆದರೆ ವಾಹನ ಚಾಲಕ/ಸವಾರನ ಅರಿವಿಗೇ ಬಾರದಂತೆ ಅಪಘಾತಗಳು ಸಂಭವಿಸುತ್ತದೆಯಲ್ಲಾ ಅದಕ್ಕೆಲ್ಲಾ ಕಾರಣ ಕಿಲ್ಲರ್ ಹೊಂಡಗಳು.

ಜಾಹೀರಾತು

ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳುವವರು, ಜಾಲಿ ರೈಡ್ ಮಾಡುವವರು ಕಡಿಮೆಯಾಗಿದ್ದರು. ಇದೀಗ ಕೊರೊನಾ ಕಡಿಮೆಯಾಗದೇ ಇದ್ದರೂ (ಹೆಚ್ಚಾಗುತ್ತಿದೆ) ಯಾವುದಾದರೂ ಒಂದು ನೆಪವೊಡ್ಡಿ ತಿರುಗಾಟ ಮಾಡುವವರು ಪ್ರತ್ಯಕ್ಷರಾಗುತ್ತಿದ್ದಾರೆ. ಮೂರು ಮಂದಿ ಒಂದೇ ಬೈಕ್ ನಲ್ಲಿ ಸವಾರಿ ಮಾಡುವವರು ಕಂಡುಬರುತ್ತಿದ್ದಾರೆ. ವೇಗವಾಗಿ ಹೋಗಿ ಬಿದ್ದು, ಯಾವುದಾದರೂ ವಾಹನಕ್ಕೆ ಡಿಕ್ಕಿಯಾದರೆ ಆ ಇನ್ನೊಂದು ವಾಹನದವರನ್ನು ತರಾಟೆಗೆ ತೆಗೆದುಕೊಳ್ಳುವುದೂ ಉಂಟು. ಆದರೆ ಈ ಅಪಘಾತಗಳು ಹಾಗಲ್ಲ. ಸರಿಯಾಗಿ ಚಲಾಯಿಸಿಕೊಂಡು ಹೋದರೂ ವಾಹನಗಳ ಮೇಲೆಯೇ ಮರಗಳು ಎರಗಿದರೆ ಏನು ಮಾಡುವುದು, ಎದುರು ಧುತ್ತನೆ ಹೊಂಡ ಕಂಡರೆ ಸ್ಟ್ಯಿಯರಿಂಗ್ ನಿಯಂತ್ರಣ ತಪ್ಪದೇ ಇರುತ್ತದೆಯೇ?

ಜಾಹೀರಾತು

ಮಂಗಳವಾರ ಬಂಟ್ವಾಳ ತಾಲೂಕಿನ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ (ಬೆಂಗಳೂರಿಗೆ ಹೋಗುವ)ಯಲ್ಲಿ ಇಂಥ ಎರಡು ಅಪಘಾತಗಳು ಸಂಭವಿಸಿದವು. ಒಂದು ಸೂರಿಕುಮೇರು ಬಳಿ ದಾಸಕೋಡಿಯಲ್ಲಿ ಕಾರಿನ ಮೇಲೆ ಮರ ಬಿದ್ದರೆ, ಇನ್ನೊಂದು ಬೋಳಂಗಡಿಯಲ್ಲಿ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿತ್ತು.

Photo: Laxman, Pooja Studio Melkar

ಮರದ ತುಂಡುಗಳನ್ನು ಹೇರಿಕೊಂಡು ಬಿಸಿರೋಡು ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ಮೆಲ್ಕಾರ್ ಸಮೀಪದ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿ ರಸ್ತೆಗೆ ಬಿತ್ತು. ಮರದ ಲಾರಿ ಬೀಳುವ ಸ್ಥಿತಿ ಯಲ್ಲಿ ವಾಲಿ ನಿಂತಿರುವ ವೇಳೆಯೇ ಇದನ್ನು ಪಕ್ಕಕ್ಕೆ ಸರಿಸಲು ಕ್ರೇನ್ ಸ್ಥಳಕ್ಕೆ ತರಿಸಲಾಗಿತ್ತಾದರೂ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಅಡ್ಡಲಾಗಿ ಮತ್ತೆ ಬಿತ್ತು. ಇದರಿಂದಾಗಿ ವಾಹನದಟ್ಟಣೆ ಉಂಟಾಯಿತು. ಸೋಶಿಯಲ್ ಮೀಡಿಯಾಗಳಲ್ಲಿ ಮೇಲ್ಕಾರ್ ನಲ್ಲಿ ಟ್ರಾಫಿಕ್ ಜಾಮ್ ಎಂಬ ಮೆಸೇಜುಗಳು ಹರಿದಾಡಿದವು. ಕೆಲವರು ವಿಡಿಯೋ ಮಾಡಿ ಹರಿಯಬಿಟ್ಟರು. ಇದೇ ಹೊತ್ತಿನಲ್ಲಿ ಮೇಲ್ಕಾರ್ ನ ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಆಗ ಧೋ ಎಂದು ಮಳೆ ಸುರಿಯುತ್ತಿತ್ತು.

ಜಾಹೀರಾತು

ಮರದ ತುಂಡುಗಳನ್ನು ಹೇರಿಕೊಂಡು ಬಿಸಿರೋಡು ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ಮೆಲ್ಕಾರ್ ಸಮೀಪದ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿ ರಸ್ತೆಗೆ ಬಿತ್ತು. ಮರದ ಲಾರಿ ಬೀಳುವ ಸ್ಥಿತಿ ಯಲ್ಲಿ ವಾಲಿ ನಿಂತಿರುವ ವೇಳೆಯೇ ಇದನ್ನು ಪಕ್ಕಕ್ಕೆ ಸರಿಸಲು ಕ್ರೇನ್ ಸ್ಥಳಕ್ಕೆ ತರಿಸಲಾಗಿತ್ತಾದರೂ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಅಡ್ಡಲಾಗಿ ಮತ್ತೆ ಬಿತ್ತು. ಇದರಿಂದಾಗಿ ವಾಹನದಟ್ಟಣೆ ಉಂಟಾಯಿತು. ಸೋಶಿಯಲ್ ಮೀಡಿಯಾಗಳಲ್ಲಿ ಮೇಲ್ಕಾರ್ ನಲ್ಲಿ ಟ್ರಾಫಿಕ್ ಜಾಮ್ ಎಂಬ ಮೆಸೇಜುಗಳು ಹರಿದಾಡಿದವು. ಕೆಲವರು ವಿಡಿಯೋ ಮಾಡಿ ಹರಿಯಬಿಟ್ಟರು. ಇದೇ ಹೊತ್ತಿನಲ್ಲಿ ಮೇಲ್ಕಾರ್ ನ ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಆಗ ಧೋ ಎಂದು ಮಳೆ ಸುರಿಯುತ್ತಿತ್ತು.

ಜಾಹೀರಾತು

ಬೋಳಂಗಡಿಯಲ್ಲಿ ಕ್ರೇನ್ ಮೂಲಕ ರಸ್ತೆ ತೆರವು ಕಾರ್ಯಾಚರಣೆ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಅಪಘಾತದ ಸರಣಿ, ಬಾಯ್ದೆರೆದ ಹೊಂಡಗಳು, ರಸ್ತೆಗುರುಳುವ ಮರಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*