ಕರ್ನಾಟಕ ಕೇರಳ ಗಡಿ ಭಾಗದ ಕೇರಳದ ಬಾಯಾರು ಸಮೀಪ ಕನಿಯಾಲ ಗುರುಕುಮೇರಿ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ರಕ್ತಸಂಬಂಧಿಗಳನ್ನೇ ಹತ್ಯೆ ಮಾಡಿದ್ದಾನೆ. ಸೋಮವಾರ ಘಟನೆ ನಡೆದಿದೆ. ಆರೋಪಿ ಉದಯ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು, ವಿವರಗಳು ಇನ್ನಷ್ಟೇ ತಿಳಿದುಬರಬೇಕು.
ಜಾಹೀರಾತು
ಸದಾಶಿವ, ವಿಠಲ, ಬಾಬು ಮತ್ತು ದೇವಕಿ ಎಂಬವರನ್ನು ಉದಯ ಎಂಬಾತ ಹತ್ಯೆಗೈದುದಾಗಿ ಆರೋಪಿಸಲಾಗಿದ್ದು, ಸ್ಥಳೀಯರು ಆರೋಪಿಯನ್ನು ಹಿಡಿದು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ನಡೆಯುತ್ತಿದ್ದ ವೇಳೆ ಉದಯನ ತಾಯಿ ಲಕ್ಷ್ಮೀ ಓಡಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.ಯಾವುದೋ ದ್ವೇಷ ಕೊಲೆಗೆ ಕಾರಣ ಎನ್ನಲಾಗಿದ್ದು, ಸದಾಶಿವ, ವಿಠಲ ಮತ್ತು ಬಾಬು ಎಂಬವರು ಉದಯನ ಮಾವಂದಿರು ಎನ್ನಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಾಯಾರು ಸಮೀಪ ಸಂಬಂಧಿಯಿಂದಲೇ ನಾಲ್ವರ ಹತ್ಯೆ"