ಜಾಹೀರಾತು
ಜಾಹೀರಾತು
ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಹೈ ಮಾಸ್ಟ್ ದೀಪಕ್ಕೆಂದು ಒಂದಾನೊಂದು ಕಾಲದಲ್ಲಿ ಹಾಕಲಾಗಿದ್ದ ಕಂಬದ ಅವಶೇಷವೀಗ ಅಪಾಯಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬಸ್ ನಿಲ್ದಾಣಕ್ಕೆ ಬಸ್ಸುಗಳು ತಿರುಗುವ ಪ್ರದೇಶದಲ್ಲಿರುವ ಈ ಜಾಗದಲ್ಲೀಗ ಕಂಬವಿಲ್ಲ. ಅದನ್ನು ತೆಗೆಯಲಾಗಿದೆ. ಆದರೆ ಅದರ ಅವಶೇಷವನ್ನು ಗಮನಿಸದೇ ಇದ್ದರೆ ಅಪಾಯ ನಿಶ್ಚಿತ. ಈಗಾಗಲೇ ಹಲವರ ವಾಹನಗಳು ಇದಕ್ಕೆ ಗುದ್ದಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ವಾಹನಗಳು ಜಖಂಗೊಂಡು ಸಾವಿರಾರು ರೂಪಾಯಿ ಖರ್ಚಾಗಿವೆ. ಕತ್ತಲಲ್ಲಿ ಇಲ್ಲಿ ಈ ರೀತಿಯ ರಚನೆ ಇರುವುದೂ ಗೊತ್ತಾಗುವುದಿಲ್ಲ. ಈ ಕುರಿತು ಬಂಟ್ವಾಳ ಪುರಸಭೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಂಬದ ಅವಶೇಷ"