ರಸ್ತೆಗೆ ಗುಡ್ಡ ಜರಿದು ಬಿದ್ದ ಕಾರಣದಿಂದ ಬಿಸಿರೋಡು ಉಳ್ಳಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಶುಕ್ರವಾರ ನಡೆದಿದೆ. ಬಳಿಕ ಬದಲಿ ರಸ್ತೆ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ಜಾಹೀರಾತು
ಮಂಗಳೂರು ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಕೋಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿದ್ದ ಗುಡ್ಡವೊಂದು ರಾತ್ರಿಯಿಂದ ಸುರಿಯುತ್ತಿರುವ ಬಾರೀ ಮಳೆಗೆ ಜರಿದು ರಸ್ತೆಗೆ ಬಿದ್ದು ಸಂಚಾರ ಬಂದ್ ಆಯಿತು. ಬಿಸಿರೋಡಿನಿಂದ ಸಜೀಪ ಚೇಳೂರು, ಬೋಳ್ಯಾರು ಮುಡಿಪು ಮೂಲಕ ಉಳ್ಳಾಲ ಮಂಗಳೂರು ಸಂಪರ್ಕದ ರಸ್ತೆಯ ಬೋಳ್ಯಾರು ಸಮೀಪದ ಮಿತ್ತಕೋಡಿ ಎಂಬಲ್ಲಿ ರಸ್ತೆಗೆ ಗುಡ್ಡ ಜರಿದು ಬಿತ್ತು. ಬಿಸಿರೋಡಿನಿಂದ ಮೆಲ್ಕಾರ್ ಬೋಳ್ಯಾರು ಮೂಲಕ ಮಂಗಳೂರು ಸಂಚಾರ ಮಾಡುವ ಬಸ್ ಹಾಗೂ ಇತರೆ ವಾಹನಗಳು ಬೋಳ್ಯಾರ್ ನಿಂದ ಕುರ್ನಾಡು ಮೂಲಕ ಮುಡಿಪುವಿಗೆ ಹೋಗಲು ಬದಲಿ ವ್ಯವಸ್ಥೆ ಮಾಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗುಡ್ಡ ಜರಿದು ಬಿ.ಸಿ.ರೋಡ್ ಉಳ್ಳಾಲ ಸಂಚಾರಕ್ಕೆ ಅಡಚಣೆ"