ಸಿಪಿಐ ರಾಜ್ಯ ನಾಯಕ, ಮಾಜಿ ಶಾಸಕ ಎಐಟಿಯುಸಿ ಪೋಷಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ಧ ನ್ಯಾಯವಾದಿ ಎಂ ಸಿ ನರಸಿಂಹನ್ ನಿಧನ ಹಿನ್ನೆಲೆಯಲ್ಲಿ ಸಿಪಿಐ ಹಾಗೂ ಎಐಟಿಯುಸಿ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ನುಡಿ-ನಮನ ಸಭೆ ಇತ್ತೀಚೆಗೆ ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಜರುಗಿತು.
ಜಾಹೀರಾತು
ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿ ಎಂ.ಸಿ.ಎನ್ ರವರು ತನ್ನ ಜೀವನದುದ್ದಕ್ಕೂ ಕಾರ್ಮಿಕ ವರ್ಗದ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು ಎಂದರು. ಸಿಪಿಐ ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಸಿಪಿಐ ಜಿಲ್ಲಾ ಮುಂದಾಳು ಎಂ.ಕರುಣಾಕರ್, ಎಐಟಿಯುಸಿ ಮುಂದಾಳು ಬಿ.ನಾರಾಯಣ, ಸಾಮಾಜಿಕ ನ್ಯಾಯ ಪರ ಸಮಿತಿ ಮುಂದಾಳು ಪ್ರಭಾಕರ ದೈವಗುಡ್ಡೆ, ರಾಜಾ ಚಂಡ್ತಿಮಾರ್ ಮೊದಲಾದವರು ನುಡಿನಮನ ಸಲ್ಲಿಸಿದರು. ಸಿಪಿಐ ಜಿಲ್ಲಾ ಮುಂದಾಳು ಸುರೇಶ್ ಕುಮಾರ್ ಬಂಟ್ವಾಳ್ ವಂದಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಿಪಿಐ ಧುರೀಣ, ಹಿರಿಯ ನ್ಯಾಯವಾದಿ ಎಂ.ಸಿ.ನರಸಿಂಹನ್ ಅವರಿಗೆ ಸಂತಾಪ ಸಭೆ"