NEWS ALERT: ಒಂದೆಡೆ ಮುಕ್ತ ಸಂಚಾರಕ್ಕೆ ಅವಕಾಶ, ಮತ್ತೊಂದೆಡೆ ಕೊರೊನಾ ಕೇಸುಗಳ ಹೆಚ್ಚಳ

ಬಹುಜನರ ಬೇಡಿಕೆಯ ಮೇರೆಗೆ ಷರತ್ತುಗಳಿಗೆ ಒಳಪಟ್ಟು ಮುಕ್ತ ಸಂಚಾರಕ್ಕೆ ಅವಕಾಶ ಕೊಡುವ ಹೊತ್ತಿನಲ್ಲಿಯೇ ರಾಜ್ಯದಲ್ಲಿ ಸೋಮವಾರ 99 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹೆಚ್ಚಿನ ಪ್ರಕರಣಗಳು ಅನ್ಯರಾಜ್ಯ, ದೇಶದಿಂದ ಆಗಮಿಸಿದವರಲ್ಲಿ ಇದೆ.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಯುವಕ ಮತ್ತು 55 ವರ್ಷದ  ಮಹಿಳೆಗೆ ಸೋಂಕು ತಗಲಿದೆ. 30 ವರ್ಷದ ಯುವಕ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯಲ್ಲಿ ಸೋಂಕು ತಗಲಿದ್ದು, ಈತ ರಾಯಘಡ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಇದ್ದು, ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 28 ವರ್ಷದ ಮಹಿಳೆ ಮುಂಬೈನಿಂದ ಆಗಮಿಸಿದ್ದು, ಇವರಿಗೆ ಸೋಂಕು ತಗಲಿದೆ. ಇವರ ಪೈಕಿ ಯುವಕ  ಮೂಲತಃ ಬಂಟ್ವಾಳ ತಾಲೂಕಿನ ಕರೋಪಾಡಿಯವರು, ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದವರು. ಮಹಿಳೆ ಮಂಗಳೂರಿನ ಯೆಯ್ಯಾಡಿಯವರು.

ಕರ್ನಾಟಕದ ಸ್ಥಿತಿ:

  • ಕರ್ನಾಟಕದಲ್ಲಿ ಇಂದು 99 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.
  • ಬೆಂಗಳೂರು 24, ಮಂಡ್ಯ 17,ಕಲಬುರ್ಗಿ 11, ಉತ್ತರಕನ್ನಡ 8, ರಾಯಚೂರು 6, ಗದಗ 5, ಯಾದಗಿರಿ 5, ವಿಜಯಪುರ 5,ಹಾಸನ 4, ಕೊಪ್ಪಳ 3,ಬೆಳಗಾವಿ 2, ದಕ್ಷಿಣಕನ್ನಡ 2,ಮೈಸೂರು 1, ಕೊಡಗು 1,ಬಳ್ಳಾರಿ 1, ದಾವಣಗೆರೆ 1,ಬೀದರ್ 1 ಉತ್ತರಕನ್ನಡ 1,ಉಡುಪಿ 1.
  • ಒಟ್ಟು ಹೊಸ ಪ್ರಕರಣಗಳು 99. ಚಿಕಿತ್ಸೆ ಪಡೆಯುತ್ತಿರುವವರು 678. ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರು 530. ಮೃತಪಟ್ಟವರು 37. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 12.

ಹೆಚ್ಚಿನ ಸುದ್ದಿಗಳಿಗೆ ಈ ಗ್ರೂಪ್ ಸೇರಬಹುದು. ಕ್ಲಿಕ್ ಮಾಡಿರಿ

https://chat.whatsapp.com/LNdS3qwTHVYLnGnKXmfSCn

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "NEWS ALERT: ಒಂದೆಡೆ ಮುಕ್ತ ಸಂಚಾರಕ್ಕೆ ಅವಕಾಶ, ಮತ್ತೊಂದೆಡೆ ಕೊರೊನಾ ಕೇಸುಗಳ ಹೆಚ್ಚಳ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*