ದ.ಕ.ಜಿಲ್ಲೆಯಲ್ಲಿ ಕೆಲ ನಿರ್ಬಂಧ ವಿಧಿಸಿ ನಿಷೇಧಾಜ್ಞೆ ವಿಧಿಸಲಾಗಿದ್ದು, ಕಳೆದೆರಡು ದಿನಗಳ ವಿದ್ಯಮಾನ ಅವಲೋಕಿಸಿ ಜಿಲ್ಲಾಧಿಕಾರಿ ಸಿಂದೂ ಡಿ .ರೂಪೇಶ್ ಕೆಲ ಸೂಚನೆಗಳನ್ನು ನೀಡಿದ್ದಾರೆ.
ಜಾಹೀರಾತು
- ಬ್ಯಾಂಕುಗಳು ತಮ್ಮ ಸಿಬ್ಬಂದಿ ಪಟ್ಟಿಯನ್ನು ಹಾಗೂ ಅವರ ಮನೆಯಿಂದ ಬ್ಯಾಂಕ್ ಗೆ ಹೋಗುವ ರೂಟ್ ಮ್ಯಾಪನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
- ದ್ವಿಚಕ್ರ ಹಾಗೂ 4 ಚಕ್ರ ವಾಹನಗಳು ಪಾಸ್ ಇಲ್ಲದೆ ಸಂಚರಿಸುತ್ತಿದ್ದಲ್ಲಿ, ಅಂಥ ವಾಹನಗಳನ್ನು ಪೊಲೀಸ್ ವಶಕ್ಕೆ.
- ಅತೀ ತುರ್ತು ವೈದ್ಯಕೀಯ ಸೇವೆಗಳಾದ ಡಯಾಲಿಸಿಸ್, ಕಿಮೋಥೆರಪಿ, ಗರ್ಭಿಣಿಯರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್ ರೂಂ ಟೋಲ್ ಫ್ರೀ ನಂ. 1077ಕ್ಕೆ ಕರೆ ಮಾಡಿದಲ್ಲಿ ಅಥವಾ ವಾಟ್ಸಾಪ್ ನಂಬರ್ 9483908000 ಗೆ ಮೆಸೇಜ್ ಮಾಡಿದಲ್ಲಿ ಒಂದು ದಿನದ ತುರ್ತು ವೈದ್ಯಕೀಯ ಇ-ಪಾಸ್ ಗಳನ್ನು ಕಂಟ್ರೋಲ್ ರೂಂ ನಿಂದಲೇ ವಿತರಿಸಲಾಗುವುದು. ಉಳಿದ ವೈದ್ಯಕೀಯ ಸೇವೆಗೆ 108 ಅಥವಾ 1077ಕ್ಕೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು.
- ಏ.5, 6, 7ರಂದು ಈ ಮೂರು ದಿನಗಳೂ ನ್ಯಾಯಬೆಲೆ ಅಂಗಡಿಗಳಿಗೆ ರಜೆ ಇರುವುದಿಲ್ಲ. ಈ ದಿನಗಳಂದು ಎಂದಿನಂತೆ ಪಡಿತರ ವಿತರಿಸಲು ಸೂಚಿಸಲಾಗಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾಕ್ ಡೌನ್: ತುರ್ತು ವೈದ್ಯಕೀಯ ಸೇವೆ ಇದ್ದರೆ ಈ ನಂಬರ್ ಗೆ ಕರೆ ಮಾಡಿ"