ಫೆ.9ರಂದು ಜಾತ್ರೋತ್ಸವ ಕಾರ್ಯಕ್ರಮಗಳು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಜನರ ಪಾಲ್ಗೊಳ್ಳುವಿಕೆಯಿಂದ ಆರಂಭಗೊಂಡವು. 9ರಂದು ಸಂಜೆ ಸಜೀಪನಡು ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಭಂಡಾರ ಹೊರಟು, ರಾತ್ರಿ ಶ್ರೀ ಕ್ಷೇತ್ರಕ್ಕೆ ತಲುಪಿತು. ಬಳಿಕ ಧ್ವಜಾವರೋಹಣ, ರಾತ್ರಿ ದೇವರ ಬಲಿ ಉತ್ಸವಗಳು ನೆರವೇರಿದವು. ಫೆ.10ರಿಂದು ಬಯನಬಲಿ ಉತ್ಸವ, ರಾತ್ರಿ ದೇವರ ಬಲಿ, ಫೆ.11ರಂದು ನಡುಬಲಿ, ಪಾಲಕಿ ಉತ್ಸವ, ರಾತ್ರಿ ಶ್ರೀ ದೇವರ ಬಲಿ, ಪಾಲಕಿ ಉತ್ಸವ ಹಾಗೂ ರಥಬೀದಿಯಲ್ಲಿ ಸಾಗಿ ಕಟ್ಟೆ ಉತ್ಸವ ನಡೆದವು.
ಫೆ.13ರಂದು ಗುರುವಾರ ಧ್ವಜಾವರೋಹಣ, ನಾಲ್ಕೈತ್ತಾಯ ದೈವದ ನೇಮ, ರಾತ್ರಿ ಅವಭೃತ ಸ್ನಾನ, ದೈವದ ನೇಮೋತ್ಸವ ಹಾಗೂ 14ರಂದು ಸಂಪ್ರೋಕ್ಷಣೆ ನೆರವೇರಲಿದೆ
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.
Be the first to comment on "ನಂದಾವರ: ವೈಭವದ ಮಹಾರಥೋತ್ಸವ"