ವಿಟ್ಲದ ಶಿಕ್ಷಣ, ಸಾಂಸ್ಕೃತಿಕ, ಸಹಕಾರಕ್ಕೆ ಕೊಡುಗೆ ನೀಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ತಿರುಮಲೇಶ್ವರ ಭಟ್

  • ಡಿ.14ರಂದು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಶತಮಾನದ ಸಂಸ್ಮರಣೆ, ಪುಸ್ತಕ ಬಿಡುಗಡೆ

https://www.bantwalnews.com

ಸಹಕಾರ, ಶಿಕ್ಷಣ, ಸಾಹಿತ್ಯ, ಸಂಘಟನೆ, ರಾಜಕೀಯಗಳಲ್ಲಿ ವಿಟ್ಲ ಪರಿಸರವನ್ನು ಸಂಘಟಿಸಿದವರು ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ತಿರುಮಲೇಶ್ವರ ಭಟ್ಟರು. ವಿಟ್ಲವನ್ನು ಕೇಂದ್ರೀಕರಿಸಿಕೊಂಡು ರಾಜಕೀಯ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಟ್ಠಲ ಹೈಸ್ಕೂಲು ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದ ಅವರು ಪತ್ರಕರ್ತರೂ ಸಾಹಿತಿಯೂ ಆಗಿದ್ದರು. ನವಭಾರತ ಪತ್ರಿಕೆಯ ವಿಟ್ಲದ ವರದಿಗಾರರಾಗಿದ್ದರು ವಿಠಲ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಡಿ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಶತಮಾನದ ಸಂಸ್ಮರಣೆ ಮತ್ತು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು

ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ವಹಿಸಲಿದ್ದು, ವಿಠಲ ವಿದ್ಯಾಸಂಘ ಸಂಚಾಲಕ ಎಲ್.ಎನ್.ಕುಡೂರು ಪುಸ್ತಕ ಬಿಡುಗಡೆ ಮಾಡುವರು. ಪ್ರಗತಿಪರ ಕೃಷಿಕ ಸಿ.ವಿ.ಗೋಪಾಲಕೃಷ್ಣ ಮತ್ತು ವಿಮರ್ಶಕ, ಸಾಹಿತಿ ಎಸ್.ಆರ್.ವಿಜಯಶಂಕರ ಸಂಸ್ಮರಣಾ ಭಾಷಣ ಮಾಡುವರು. ಈ ಸಂದರ್ಭ ವಿಟ್ಲ ಕನ್ನಡ ಸಂಘ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ದಿವಾಣ ಅನಂತ ಭಟ್, ಲೇಖಕ ಎ.ಜಿ.ರಮೇಶಚಂದ್ರ ಭಾಗವಹಿಸುವರು.

ಕಾಂತಾವರ ಕನ್ನಡ ಸಂಘ ಮತ್ತು ವಿಟ್ಲ ಕನ್ನಡ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ವಿಟ್ಲ ಸರ್ವತೋಮುಖ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ ಎ.ಜಿ.ತಿರುಮಲೇಶ್ವರ ಭಟ್ ಅವರ ಶತಮಾನದ ಸಂಸ್ಮರಣೆ, ಎ.ಜಿ.ಟಿ.ಭಟ್ ಪುಸ್ತಕ ಬಿಡುಗಡೆ ಸಮಾರಂಭ ವಿಟ್ಲದ ವಿಟ್ಠಲ ಪಪೂ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ ಎಂದು ಅವರ ಪುತ್ರ  ಎ.ಟಿ.ಗಿರೀಶಚಂದ್ರ ಹೇಳಿದ್ದಾರೆ.

ಜಾಹೀರಾತು

ಜೀವನ ಸಾಧನೆ:

ದ.ಕ. ಜಿಲ್ಲೆಯ ಅಂದಿನ ಪುತ್ತೂರು ತಾಲೂಕಿನ ವಿಟ್ಲವನ್ನು ಕೇಂದ್ರೀಕರಿಸಿ, ರಾಜಕೀಯ , ಸಾಮಾಜಿಕ ಬದುಕನ್ನು ಆರಂಭಿಸಿದ ಅವರು, 1950ರಲ್ಲಿ ಆರಂಭವಾದ ವಿಠಲ ಹೈಸ್ಕೂಲು ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಅವರ ಲೇಖನಗಳು ಅಂದಿನ ಉದಯಚಂದ್ರ, ನವಭಾರತ, ಪ್ರಭಾತಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಸ್ವಾತಂತ್ರ್ಯಾನಂತರ ರಾಷ್ಟ್ರಬಂಧು, ಮದರಾಸು ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ವಿಟ್ಲ ಪರಿಸರದ ನವಭಾರತ ವರದಿಗಾರರಾಗಿದ್ದವರು ಎ.ಜಿ.ತಿರುಮಲೇಶ್ವರ ಭಟ್ಟರು.

1918ರಲ್ಲಿ ಜನಿಸಿದ ಎ.ಜಿ.ತಿರುಮಲೇಶ್ವರ ಭಟ್ಟರ ತಾಯಿ ಸೌಭದ್ರಮ್ಮ, ತಂದೆ ಆಲಂಗಾರು ಗೋವಿಂದ ಭಟ್ಟ. ಪತ್ನಿ ಪರಮೇಶ್ವರಿ ಅಮ್ಮ. ಮಕ್ಕಳು ಜಯಗೋವಿಂದ, ಸುಭಾಷಿಣಿ, ಹರಿಶಂಕರ ಮತ್ತು ಗಿರೀಶಚಂದ್ರ.

ಜಾಹೀರಾತು

1941ರಲ್ಲಿ ಸತ್ಯಾಗ್ರಹ ನಡೆಸಿ ಹೊನ್ನಾವರದಲ್ಲಿ ದಸ್ತಗಿರಿಯಾದ ಅವರು, ರಾಜಕೀಯ ಕೈದಿಯಾಗಿ ಹಿಂಡಲಗಿ ಜೈಲಿನಲ್ಲಿ ಕಳೆದಿದ್ದರು. 1942ರಲ್ಲಿ ಕೆವಿವಿ ಸಂಘ ಮಂಗಳೂರಿನಲ್ಲಿ ವೃತ್ತಿ ಆರಂಭಿಸಿದ ಅವರು ಅಂದು ಮಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಪತ್ರಕರ್ತರ ಸಮ್ಮೇಳನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದರು. 1946ರಲ್ಲಿ ವಿಟ್ಲದಲ್ಲಿ ವಾಸ್ತವ್ಯ ಆರಂಭಿಸಿದ ಬಳಿಕ 1948-50ರಲ್ಲಿ ವಿಠಲ ಹೈಸ್ಕೂಲ್ ಸ್ಥಾಪನೆಗಾಗಿ ದುಡಿದರು.

1952ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ  ಪ್ರಚಾರ ನಡೆಸಿದ ಅವರು 1953ರಲ್ಲಿ ವಿಟ್ಲ ಪಂಚಾಯಿತಿ ಉಪಾಧ್ಯಕ್ಷರಾದರು.  ಬಳಿಕ ವಿಟ್ಲ ಸಹಕಾರಿ ಸಂಘ ಅಧ್ಯಕ್ಷ, ವಿಟ್ಲ ರೂರಲ್ ಕೋಓಪರೇಟಿವ್ ಸ್ಥಾಪನೆ, ದ.ಕ.ಜಿಲ್ಲಾ ಮದ್ಯಪಾನ ನಿಷೇಧ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 1941ರಲ್ಲಿ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ ಎ.ಜಿ.ತಿರುಮಲೇಶ್ವರ ಭಟ್ಟರು, ಸ್ವಾತಂತ್ರ್ಯ ಲಭ್ಯವಾದ ಮೇಲೆ ದೇಶಾಭಿಮಾನಿಯಾಗಿ ಸಾಧನೆಗೈದವರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಟ್ಲದ ಶಿಕ್ಷಣ, ಸಾಂಸ್ಕೃತಿಕ, ಸಹಕಾರಕ್ಕೆ ಕೊಡುಗೆ ನೀಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ತಿರುಮಲೇಶ್ವರ ಭಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*