ಐದು ವರ್ಷದ ಬಾಲಕನಿಗೆ ಇಡೀ ಭೂಗೋಳವೇ ಬಾಯಿಪಾಠ

ಈ ಬಾಲಕನ ಹೆಸರು ಅಕ್ಷಜ್ ಚಿದಾನಂದ. ವಯಸ್ಸು ಕೇವಲ ಐದು. ಕೇಳಿದರೆ ಪಟಪಟನೆ ಜಗತ್ತಿನ ಎಲ್ಲ ದೇಶಗಳ ಬಗ್ಗೆ ಹೇಳುತ್ತಾನೆ. ಯು.ಎಸ್.ಎ.ಯ ಬೆಟ್ಟೆನ್ ಡ್ರಾದಲ್ಲಿರುವ ಈತ ಅಲ್ಲಿ ಕಿಂಡರ್ ಗಾರ್ಡನ್ ಗೆ ಹೋಗುತ್ತಾನೆ. ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರಿನ ಬೊಳಿಗದ್ದೆಯ ಚಿದಾನಂದ ಮತ್ತು ಸಂಧ್ಯಾ ಅವರೀಗ ನೆಲೆಸಿರುವುದು ಯು.ಎಸ್.ಎ.ನಲ್ಲಿ. 2014ರಲ್ಲಿ ಜನಿಸಿದ ಇವರ ಮಗ ಅಕ್ಷಜ್ ಈಗ ತನ್ನ ಜ್ಞಾಪಕಶಕ್ತಿಯಿಂದ ಸುದ್ದಿಯಾಗಿದ್ದಾನೆ.

ಜಾಹೀರಾತು

2 ವರ್ಷದವನಾಗಿದ್ದಾಗಲೇ ಅಕ್ಷಜ್, ಯು.ಎಸ್.ಎ. ಮ್ಯಾಪ್ ನೋಡುತ್ತಿದ್ದ. ಎಲ್ಲ ಮಕ್ಕಳೂ ಮ್ಯಾಪ್ ನೋಡಿ ಹರಿದು ಹಾಕುತ್ತಿದ್ದರೆ, ಈತ 3 ವರ್ಷದವನಾದಾಗ ಅಮೇರಿಕಾದ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರು ಹೇಳತೊಡಗಿದ.

4 ವರ್ಷವಾದಾಗ ಪ್ರಪಂಚದ 195 ದೇಶಗಳ ಹೆಸರು ಹೇಳಲು ಶಕ್ತನಾದ. ನೀವು ವಿಶ್ವದ ಭೂಪಟವನ್ನು ಆತನೆದುರು ಹರಹಿದರೆ, ಅವುಗಳು ಯಾವ ದೇಶ ಎಂದು ಹೇಳುತ್ತಾನೆ. ಯಾವುದಾದರೂ ದೇಶದ ರಾಷ್ಟ್ರಧ್ವಜವನ್ನು ನೀವು ತೋರಿಸಿದರೆ, ಅದು ಯಾವ ದೇಶದ್ದು ಎಂದು ಅಕ್ಷಜ್ ತಿಳಿಸುತ್ತಾನೆ. ಇದೀಗ ಆತನಿಗೆ ಐದು ವರ್ಷ. ದೇಶದ ಹೆಸರು, ಧ್ವಜ ನೋಡಿದರೆ ದೇಶವನ್ನು ಗುರುತಿಸುತ್ತಿದ್ದಾತ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಂದು ದೇಶದ ರಾಜಧಾನಿಯ ಹೆಸರು ಹೇಳುತ್ತಿದ್ದಾನೆ. ಮ್ಯಾಪ್ ನಲ್ಲಿ ದೇಶಗಳ ನಕ್ಷೆಯನ್ನೇ ಮನಸ್ಸಿನಲ್ಲಿಟ್ಟು, ಅದನ್ನೇ ಜ್ಞಾಪಕದಲ್ಲಿಟ್ಟು ಹೇಳುತ್ತಿರುವ ಅಕ್ಷಜ್ ಈಗ ಯು.ಎಸ್.ನಲ್ಲಿನ ಮಾಧ್ಯಮಗಳ ಗಮನ ಸೆಳೆದಿದ್ದಾನೆ ಎನ್ನುತ್ತಾರೆ ಆತನ ತಂದೆ ಚಿದಾನಂದ್. ಮೂರು ವರ್ಷದವನಾಗಿದ್ದಾಗಲೇ ಆಂಗ್ಲ ಭಾಷೆಯನ್ನು ಕಲಿತ ಅಕ್ಷಜ್, ಮಾತೃಭಾಷೆ ಕನ್ನಡವನ್ನು ಮಾತನಾಡಬಲ್ಲ. ಭಾರತದ ಹೆಚ್ಚಿನ ರಾಜ್ಯಗಳ ರಾಜಧಾನಿಯನ್ನು ಹೇಳಬಲ್ಲ.

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಐದು ವರ್ಷದ ಬಾಲಕನಿಗೆ ಇಡೀ ಭೂಗೋಳವೇ ಬಾಯಿಪಾಠ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*