ಸಿಡಿಲು ಬಡಿದು ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿ ಬೆಟ್ಟು ಪರಿಸರದ ಕೆಲವು ಮನೆಗಳಿಗೆ ಹಾನಿಯಾಗಿದೆ.
ಜಾಹೀರಾತು
ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಭಂಡಾರಿಬೆಟ್ಟು ಗುಜ್ಕರೊಕ್ಕು ಲಾರೆನ್ಸ್ ರಾಡ್ರಿಗಸ್ ಹಾಗೂ ಸೈಮನ್ ರೋಡ್ರಿಗಸ್
ಎಂಬವರ ಮನೆಯ ತೆಂಗಿನ ಮರ ಹಾಗೂ ಬಾಳೆಗಿಡಕ್ಕೆ ಹಾನಿಯಾದರೆ, ಮನೆಯ ಸಂಪೂರ್ಣ ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಮೀಟರ್ , ಸ್ವಿಚ್ ಬೋರ್ಡ್ ಗಳು, ಬಲ್ಬ್ ಗಳು ಸಿಡಿಲು ಹೊಡೆದ ರಭಸಕ್ಕೆ ಹೊರಗೆ ಎಸೆಯಲ್ಪಟ್ಟಿದೆ, ಟಿವಿ, ಪ್ರಿಡ್ಜ್ ಸಹಿತ ಅನೇಕ ವಿದ್ಯುತ್ ಉಪಕರಣಗಳು ಕೆಟ್ಟುಹೊಗಿವೆ. ಸ್ಥಳಕ್ಕೆ ಬಂಟ್ವಾಳ ಕಂದಾಯ ಇಲಾಖೆಯ ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಹಾಗೂ ಸದಾಶಿವ ಕೈಕಂಬ, ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಿಡಿಲು ಬಡಿದು ಮನೆಗಳಿಗೆ ಹಾನಿ"