ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವೆಡೆ ಮಳೆ, ಉಳಿದೆಡೆ ಕೇವಲ ಗುಡುಗು, ಮಿಂಚಿನ ಪ್ರದರ್ಶನ, ಬರಿದಾದ ನೇತ್ರಾವತಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಉರಿಸೆಖೆ, ಮೋಡ ಕವಿದ ವಾತಾವರಣ ಇದ್ದರೆ, ರಾತ್ರಿಯ ವೇಳೆ ಬೆಳ್ತಂಗಡಿ ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಆದರೆ ಹೆಚ್ಚಿನ ಭಾಗಗಳಲ್ಲಿ ಗುಡುಗು, ಮಿಂಚಿನ ಪ್ರದರ್ಶನವಷ್ಟೇ ಆಗಿದ್ದು, ಸೆಖೆ ಮತ್ತಷ್ಟು ಹೆಚ್ಚಾಗಿದೆ.

dharmasthala

ರಾತ್ರಿ ಸುಮಾರು 8ಗಂಟೆಗೆ ಮಿಂಚು, ಗುಡುಗು ಸಹಿತ ಉಜಿರೆ, ಕಾಶಿಬೆಟ್ಟು, ಬೆಳ್ತಂಗಡಿ, ಧರ್ಮಸ್ಥಳ, ಮುಂಡಾಜೆ, ಕಾನರ್ಪ, ಗೇರುಕಟ್ಟೆ, ಹಲೇಜಿ, ಗುರಿಪಳ್ಳ, ಸತ್ಯನಪಲ್ಕೆ, ಸೇರಿದಂತೆ ಹಲವೆಡೆ ಮಳೆ ತಂಪೆರೆದಿದೆ. ಇದರಿಂದಾಗಿ ವ್ಯತ್ಯಯಗೊಂಡಿದೆ.

ಜಾಹೀರಾತು

ಬಂಟ್ವಾಳ ತಾಲೂಕಿನ ಕೆಲವೆಡೆ ಶನಿವಾರ ಸಂಜೆಯ ಬಳಿಕ ಗುಡುಗು,ಸಿಡಿಲಿನೊಂದಿಗೆ ಮಳೆ ಸುರಿದು ತಂಪೆರೆದರೆ ಉಳಿದೆಡೆ ಕೇವಲ ಗುಡುಗಿನ ಸದ್ದು ಕೇಳಿತು. ಬಿ.ಸಿ.ರೋಡ್ ಸುತ್ತಮುತ್ತ ಕೆಲ ಹನಿ ಮಳೆ ಸುರಿದಿದ್ದು, ಗುಡುಗಿನ ಅಬ್ಬರ ಜೋರಾಗಿತ್ತು. ಮಾಣಿ, ಸರಪಾಡಿ ಮತ್ತಿತರ ಕಡೆಗಳಲ್ಲಿ ಮಳೆಯಾಗಿದ್ದರೆ, ಹಲವೆಡೆ ಹನಿ ಮಳೆಯಷ್ಟೇ ಸುರಿಯಿತು.

ಬೆಳ್ತಂಗಡಿಯ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲೂ ನಾಲ್ಕು ಗುಂಡಿಗಳಲ್ಲಿ ನೀರು ಕಡಿಮೆ ಆಗಿದೆ. ಅಸ್ವಲ್ಪ ದಿನಗಳ ಕಾಲ ಸಾಕಾಗುತ್ತೆ. ನೀರಿನ ಹರಿವು ಕಡಿಯಾಗುತ್ತಾ ಇದೆ. ನೇತ್ರಾವತಿ ನದಿಯ ಪೂರಕ ನದಿಗಳಲ್ಲಿ ನೀರು ಇಂಗುತ್ತಿದೆ. ಉಪನದಿಗಳ ನೀರು ಇಂಗುತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ‌ಉದ್ಭವವಾಗಿದೆ.

ಡಾ. ಹೆಗ್ಗಡೆ ಮನವಿ:

ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ,  ಅರಣ್ಯನಾಶ, ಸಕಲೇಶಪುರದ ಬಳಿ ಪಶ್ಚಿಮ ಘಟ್ಟ ಅರಣ್ಯದ ನಾಶ, ಉಪನದಿ ಹೇಮಾವತಿಯನ್ನು ಬರಡುಗೊಳಿಸಿದ್ದು, ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. ಮಳೆ ಶುರುವಾಗುವವರೆಗೆ ಪ್ರವಾಸಿಗರು ತಮ್ಮ ಯಾತ್ರೆಯನ್ನು ಮುಂದೂಡಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವೆಡೆ ಮಳೆ, ಉಳಿದೆಡೆ ಕೇವಲ ಗುಡುಗು, ಮಿಂಚಿನ ಪ್ರದರ್ಶನ, ಬರಿದಾದ ನೇತ್ರಾವತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*