ಪತ್ರಕರ್ತರ ರಾಜ್ಯ ಸಮ್ಮೇಳನ: ಲಕ್ಷ್ಮೀ ಮಚ್ಚಿನ ಸೇರಿದಂತೆ ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೆಳ್ತಂಗಡಿಯಲ್ಲಿದ್ದು, ಇದೀಗ ಕುಂದಾಪುರದಲ್ಲಿ ಉದಯವಾಣಿ ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ಲಕ್ಷ್ಮೀನರಸಿಂಹ ಶಾಸ್ತ್ರಿ ಮಚ್ಚಿನ (ಲಕ್ಷ್ಮೀ ಮಚ್ಚಿನ),  ಸೇರಿದಂತೆ ಹಲವು ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಶನಿವಾರ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಮುಕ್ತಾಯಗೊಂಡ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದಲ್ಲಿ  ನಡೆಯಿತು. ಲಕ್ಷ್ಮೀ ಮಚ್ಚಿನ ಅವರಿಗೆ ಬಂಟ್ವಾಳನ್ಯೂಸ್ ವತಿಯಿಂದ ಅಭಿನಂದನೆ.

ಜಾಹೀರಾತು

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ಸಮಾರೋಪ ಸಮಾರಂಭ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಸಹಿತ ಹಲವು ಗಣ್ಯರ ಉಪಸ್ಥಿತಿಯಲ್ಲಿ ಶನಿವಾರ ನಡೆಯಿತು. ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.  ಶಾಸಕ ನಾಗೇಂದ್ರ,  ಮೈಸೂರು ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ,ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,,ಕಠ್ಮಂಡು ಮೆಟ್ರೋ ಎಫ್.ಎಂ.ನ ನ್ಯೂಸ್ ಎಡಿಟರ್ ಅಶೋಕ್ ಸಿಲ್ವಿಲ್, ಕೊಲೊಂಬೋ ಡೈಲಿ ಮಿರರ್ ಸುದ್ದಿ ಸಂಪಾದಕ ಕುರುಲು ಕೂಜಾಣ ಕರಿಯಕರವಣ,ಕೊಲೊಂಬೋ ಅಂತರಾಷ್ಟ್ರೀಯ ಪೊಟೋ ಜರ್ನಲಿಸ್ಟ್ ಗೀತಿಕಾ ತಾಲೂಕದಾರ್, ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಕೆ.ವಿ.ಪ್ರಭಾಕರ್ ಸಹಿತ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.  ಉಪಾಧ್ಯಕ್ಷ ಜಯರಾಮ ಮತ್ತೀಕೆರೆ ಸ್ವಾಗತಿಸಿದರು. ಸವಿತಾ ಶಿವಕುಮಾರ್ ಬೆಂಗಳೂರು ನಿರೂಪಿಸಿದರು.

ಪ್ರಶಸ್ತಿಗಳನ್ನು ಪಡೆದವರು:

ಜಾಹೀರಾತು

ಆರ್‌.ಕೆ. ಜೋಷಿ ಬೆಂಗಳೂರು (ಎಸ್‌.ವಿ.ಜಯಶೀಲರಾವ್‌ ಪ್ರಶಸ್ತಿ), ಸು.ತ.ರಾಮೇಗೌಡ, ಬಯಲುಸೀಮೆ ದಿನಪತ್ರಿಕೆ ಚನ್ನಪಟ್ಟಣ (ಎಚ್‌.ಕೆ.ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಜಗನ್ನಾಥ ದೇಸಾಯಿ, ವಿಜಯ ಕರ್ನಾಟಕ, ರಾಯಚೂರು (ಗರುಡನಗಿರಿ ನಾಗರಾಜ್‌ ಪ್ರಶಸ್ತಿ), ತನುಜಾ ನಾಯಕ್‌, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ (ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ), ವಾದಿರಾಜ ವ್ಯಾಸಮುದ್ರ, ವಿಜಯವಾಣಿ ಕಲಬುರ್ಗಿ (ಎಂ.ನಾಗೇಂದ್ರರಾವ್‌ ಪ್ರಶಸ್ತಿ), ಸಿ.ವಿ.ರಾಘವೇಂದ್ರರಾವ್‌, ಶಿವಮೊಗ್ಗ (ಎಚ್‌.ಎಸ್‌.ರಂಗಸ್ವಾಮಿ ಪ್ರಶಸ್ತಿ), ವೀರೇಂದ್ರ, ದಿ ಹಿಂದೂ, ಶಿವಮೊಗ್ಗ (ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ), ಯಲ್ಲಪ್ಪ ತಳವಾರ, ವಿಜಯಕರ್ನಾಟಕ, ರಾಯಭಾಗ, ಬೆಳಗಾವಿ  (ಪಿ.ಆರ್‌.ರಾಮಯ್ಯ ಸ್ಮಾರಕ ಪ್ರಶಸ್ತಿ), ಅನುರಾಧಾ ಜಯಪ್ರಕಾಶ, ಕನ್ನಡ ಬಂಧು ದಿನಪತ್ರಿಕೆ ಕಲಬುರ್ಗಿ (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಕಿಕ್ಕೇರಿ ಶ್ರೀನಿವಾಸ್‌, ಮೈಸೂರು (ಬದರಿನಾಥ ಹೊಂಬಾಳೆ ಪ್ರಶಸ್ತಿ), ವೀರೇಂದ್ರ ಎಚ್‌. ಹಿರೇಕಲ್‌, ಪ್ರಜಾಪ್ರಪಂಚ ದೈನಿಕ, ಗಂಗಾವತಿ (ಕಿಡಿ ಶೇಷಪ್ಪ ಪ್ರಶಸ್ತಿ), ಗಣಪತಿ, ವಿಶ್ವವಾಣಿ ಬೆಂಗಳೂರು (ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ), 

ಅತ್ಯುತ್ತಮ ಮುಖ‍ಪುಟ ವಿನ್ಯಾಸ: ವಿಜಯವಾಣಿ, ಬೆಂಗಳೂರು (ಆರ್‌. ಶಾಮಣ್ಣ ಪ್ರಶಸ್ತಿ), ಬಿ.ಜೆ.ಗೋಪಾಲಕೃಷ್ಣ ಬಾಳು, ನಾಡ ಸಹ್ಯಾದ್ರಿ ಹಾಸನ (ಮ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ), ಕೆ.ವಿ. ಪರಮೇಶ್‌, ಸಂಯುಕ್ತ ಕರ್ನಾಟಕ, ಬೆಂಗಳೂರು (ಕೆ.ಎನ್‌.ಸುಬ್ರಹ್ಮಣ್ಯ ಪ್ರಶಸ್ತಿ), ದು.ಗು. ಲಕ್ಷ್ಮಣ, ಹೊಸ ದಿಗಂತ ಬೆಂಗಳೂರು (ಎಚ್‌.ಎಸ್‌.ದೊರೆಸ್ವಾಮಿ ಪ್ರಶಸ್ತಿ).

ಅತ್ಯುತ್ತಮ ವರದಿ/ ಲೇಖನಗಳಿಗೆ ಪ್ರಶಸ್ತಿ: ಇಮಾಂಬಿ ಚಾ.ನದಾಫ್‌, ಬೇವಿನಕೊಪ್ಪ (ಜಿ.ನಾರಾಯಣಸ್ವಾಮಿ ಪ್ರಶಸ್ತಿ), ಗಂಗಾಧರ ವಿ.ರೆಡ್ಡಿಹಳ್ಳಿ, ವರದಿಗಾರ ಪ್ರಜಾವಾಣಿ ಮಧುಗಿರಿ (ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್‌ ಬೈರಹನುಮಯ್ಯ ಪ್ರಶಸ್ತಿ), ಗೋವಿಂದರಾಜು, ವಿಜಯವಾಣಿ, ಬೆಂಗಳೂರು (ಗಿರಿಧರ ಪ್ರಶಸ್ತಿ), ಹರೀಶ್‌ ಬೇಲೂರು, ವಿಜಯವಾಣಿ, ಬೆಂಗಳೂರು (ಬಿ.ಎಸ್‌.ವೆಂಕಟರಾಂ ಪ್ರಶಸ್ತಿ), ಬಾಲಚಂದ್ರ ರೂಗಿ, ವಿಜಯ ಕರ್ನಾಟಕ, ವಿಜಯಪುರ (ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ) ಕೆ.ಎಂ.ಶಿವರಾಜು ಬೆಂಗಳೂರು (ಖಾದ್ರಿ ಶಾಮಣ್ಣ ಪ್ರಶಸ್ತಿ), ಗಣಂಗೂರು ನಂಜೇಗೌಡ, ಶ್ರೀರಂಗಪಟ್ಟಣ (ಮಂಗಳ ಎಂ.ಸಿ. ವರ್ಗೀಸ್‌ ಪ್ರಶಸ್ತಿ), ರಾಮಣ್ಣ ಚಿನ್ನಪ್ಪ ನಗ್ಗಿ ಗದಗ (ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ), ಕುಂದೂರು ಉಮೇಶ್‌ ಭಟ್‌, ವಿಜಯ ಕರ್ನಾಟಕ, ವಿಜಯಪುರ (ಆರ್‌.ಎಲ್‌. ವಾಸುದೇವರಾವ್‌ ಪ್ರಶಸ್ತಿ), ವಿಘ್ನೇಶ್ ಭೂತನಕಾಡು, ಕನ್ನಡಪ್ರಭ, ಮಡಿಕೇರಿ (ಆರ್‌.ಎಲ್‌.ವಾಸುದೇವರಾವ್‌ ಪ್ರಶಸ್ತಿ), ಅರುಣ್‌ ಯಾದವಾಡ, ಬಾಗಲಕೋಟೆ (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ), ಲಕ್ಷ್ಮೀ ಮಚ್ಚಿನ, ಉದಯವಾಣಿ, ಕುಂದಾಪುರ ( ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ), ಆರ್‌. ಮಂಜುನಾಥ್‌, ಪ್ರಜಾವಾಣಿ, ಹುಬ್ಬಳ್ಳಿ (ಯಜಮಾನ್‌ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ), ಡಿ.ಎಂ.ಘನಶ್ಯಾಮ, ಪ್ರಜಾವಾಣಿ, ಬೆಂಗಳೂರು (ಹಾಸ್ಯಲೇಖನಕ್ಕೆ ನೀಡಲಾಗುವ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ), ವೈ.ಎಸ್‌.ಎಲ್‌. ಸ್ವಾಮಿ, ಸಂಜೆವಾಣಿ, ಬೆಂಗಳೂರು, ತುರುವನೂರು ಮಂಜುನಾಥ್‌, ಕೆಂಧೂಳಿ, ಬೆಂಗಳೂರು, ಶ್ಯಾಮ್‌ ಹೆಬ್ಬಾರ್‌, ನ್ಯೂಸ್‌ 18, ಬೆಂಗಳೂರು (ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ)

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪತ್ರಕರ್ತರ ರಾಜ್ಯ ಸಮ್ಮೇಳನ: ಲಕ್ಷ್ಮೀ ಮಚ್ಚಿನ ಸೇರಿದಂತೆ ಸಾಧಕರಿಗೆ ಪ್ರಶಸ್ತಿ ಪ್ರದಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*