ಚಹ, ಊಟ ವಿತರಣೆಗೂ ಮೊದಲೇ ಸುದ್ದಿಯಾದ ಕ್ಯಾಂಟೀನ್!!

ವಾಹನದಟ್ಟಣೆ ಇದ್ದರೂ ಕಾಂಪೌಂಡ್ – ದೂರು, ಜಿಲ್ಲಾಧಿಕಾರಿ ಪರಿಶೀಲನೆ

www.bantwalnews.com   Editor: Harish Mambady

ಜಾಹೀರಾತು

ಜಾಹೀರಾತು

ಯಾರಿಗೆ ಚಹ, ಯಾರಿಗೆ ಕಾಫಿ, ಯಾರಿಗೆ ಊಟ ಎಂಬ ಧ್ವನಿಗಳು ಇಲ್ಲಿಂದ ಇನ್ನೂ ಕೇಳಬೇಕಷ್ಟೇ.. ಇಂದಿರಾ ಕ್ಯಾಂಟೀನ್ ಚುನಾವಣೆಗೂ ಮುನ್ನ ಉದ್ಘಾಟನೆಯಾಗುತ್ತದೆ ಎಂಬ ಸುದ್ದಿ ಸುಳ್ಳು ಮಾಡಿತ್ತು. ಈಗಲೂ ಆಗಿಲ್ಲ. ಆದರೆ ಉದ್ಘಾಟನೆಗೂ ಮುನ್ನ ಕಂಪೌಂಡ್ ನಿರ್ಮಾಣ ಮಾಡುತ್ತಿದ್ದು, ಇದರ ವಿರುದ್ಧ ಎದ್ದಿರುವ ಆಕ್ಷೇಪಣೆ ಮೂಲಕ ಸುದ್ದಿಯಲ್ಲಿದೆ!

ಇದು ಜಿಲ್ಲೆಯ ಪ್ರಧಾನ ‘ರಾಜಕೀಯ’ಕೇಂದ್ರ ಬಂಟ್ವಾಳ ತಾಲೂಕಿನ ರಾಜಧಾನಿ ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಕತೆ.

ಸೌಧ, ಭವನಗಳ ಊರು, ಪಾರ್ಕಿಂಗ್ ಗಿಲ್ಲ ಜಾಗ:

ಜಾಹೀರಾತು

ಭವ್ಯ ಕಟ್ಟಡಗಳು ಸರಕಾರಿ ಯೋಜನೆಗಳು, ಸಾರ್ವಜನಿಕರ ದೇಣಿಗೆಗಳಿಂದ ನಿರ್ಮಾಣವಾಗಿವೆ. ಆದರೆ ಇವಕ್ಕೆಲ್ಲ ಕಂಪೌಂಡ್ ಹಾಕಿ, ಸಾರ್ವಜನಿಕರ ವಾಹನಗಳು ನಿಲ್ಲದಂತೆ ನಿರ್ಬಂಧ ವಿಧಿಸಲಾಗುತ್ತದೆ ಎಂಬ ದೂರಿದೆ. ಬಿ.ಸಿ.ರೋಡಿನಲ್ಲಿ ಈಗಾಗಲೇ ಹಲವು ಭವನ, ಕಟ್ಟಡಗಳು ತುಂಬಿಹೋಗಿದ್ದು, ಕೆಲವು ನಿರ್ಮಾಣದ ಹಂತದಲ್ಲಿವೆ. ಖಾಲಿ ಜಾಗ ಇದ್ದಲ್ಲೆಲ್ಲ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಅದಕ್ಕೆ ಪೂರಕವಾಗಿ ವಾಹನ ನಿಲುಗಡೆಗೆ ಸರಿಯಾದ ಜಾಗವನ್ನು ತೋರಿಸಲಾಗಿಲ್ಲ.  ಹೀಗಾಗಿ ನಾನಾ ಕೆಲಸ ಕಾರ್ಯಗಳಿಗೆಂದು ಬಿ.ಸಿ.ರೋಡಿಗೆ ಆಗಮಿಸುವ ಜನರಿಗೆ ವಾಹನ ನಿಲುಗಡೆಗೆ ಪರದಾಡುವಂತಾಗುತ್ತದೆ. ಹೀಗಾಗಿ ಮಿನಿ ವಿಧಾನಸೌಧ ಸಹಿತ ಹಲವು ಕಟ್ಟಡಗಳ ಎದುರೇ ವಾಹನವನ್ನು ನಿಲ್ಲಿಸಲಾಗುತ್ತದೆ. ಹೀಗಿರುವಾಗ ಇಂದಿರಾ ಕ್ಯಾಂಟೀನ್ ಆವರಣ ಗೋಡೆಯನ್ನು ರಸ್ತೆಗೆ ನಿರ್ಮಿಸಿದರೆ ಮತ್ತಷ್ಟು ವಾಹನದಟ್ಟಣೆ, ಅಪಘಾತ ಸಾಧ್ಯತೆ ತಲೆದೋರಬಹುದು ಎಂಬುದು ಸಾರ್ವಜನಿಕರ ದೂರು.

ಜನಪ್ರತಿನಿಧಿಗಳ ಆಕ್ಷೇಪ:

ಆವರಣ ಗೋಡೆ ನಿರ್ಮಾಣಕ್ಕೆ ಕಳೆದ ಶನಿವಾರ ಬಿ.ಸಿ.ರೋಡಿಗೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಕಚೇರಿಯಲ್ಲಿ ಬಿ.ಸಿ.ರೋಡಿನ ನಗರ ಸೌಂದರ್ಯಕರಣ ಕುರಿತ ಅಧಿಕಾರಿಗಳ ಸಭೆ ಮುಗಿಸಿ ಬರುತ್ತಿದ್ದಾಗ  ಸಂಸದರಿಗೆ ಬಂದ ದೂರಿನ ಹಿನ್ನಲೆಯಲ್ಲಿ  ಇಂದಿರಾ ಕ್ಯಾಂಟೀನ್ ಮುಂಭಾಗ ರಸ್ತೆಯನ್ನು ಅತಿಕ್ರಮಿಸಿ  ಆವರಣ ಗೋಡೆ ನಿರ್ಮಿಸಿದ್ದು ಕಂಡುಬಂದಿದ್ದು, ಈ ಸಂದರ್ಭ ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.

ಜಾಹೀರಾತು

ಇಂದೇನಾಯಿತು?

ಆಕ್ಷೇಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮಂಗಳವಾರ ಖುದ್ದು ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಯೋಜನಾಧಿಕಾರಿ ಪ್ರಸನ್ನ, ಪುರಸಭೆ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಅವರು ಸ್ಥಳದ ಕುರಿತು ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದರು. ಈ ಸಂದರ್ಭ ಆವರಣಗೋಡೆ ನಿರ್ಮಿಸುವುದರಿಂದ ವಾಹನ ಸಂಚಾರಕ್ಕೆ ಆಗುವ ಅನಾನುಕೂಲತೆ ಸಹಿತ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಷೆಯನ್ನು ಗಮನಿಸಿ, ಪರಿಶೀಲಿಸಲಾಗುತ್ತದೆ, ಪಾರ್ಕಿಂಗ್ ವ್ಯವಸ್ಥೆಗೆ ತೊಡಕುಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದರು.

ಕ್ಯಾಂಟೀನ್ ಗೆ ವಿರೋಧವಿಲ್ಲ:

ಜಾಹೀರಾತು

ಈ ಸಂದರ್ಭ ಜಿಲ್ಲಾಧಿಕಾರಿ ಬಳಿ ಪರಿಸ್ಥಿತಿ ವಿವರಿಸಿದ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ನಾವು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯಾವತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಅದೊಂದು ಸರಕಾರಿ ಯೋಜನೆಯಾಗಿದ್ದು, ಪೂರ್ಣ ಸಹಮತವಿದೆ. ಆದರೆ ಕ್ಯಾಂಟೀನ್ ಗೆ ಆವರಣ ಗೋಡೆ ನಿರ್ಮಾಣ ಸಂದರ್ಭ ರಸ್ತೆಯನ್ನೇ ಅತಿಕ್ರಮಿಸಲಾಗಿದೆ. ಮೊದಲೇ ಬಿ.ಸಿ.ರೋಡ್ ವಾಹನ ಪಾರ್ಕಿಂಗ್ ನ ಸಮಸ್ಯೆಯಿಂದ ನಲುಗುತ್ತಿದೆ. ಇದಕ್ಕೆ ಪೂರಕವಾಗಿ ಇಂದಿರಾ ಕ್ಯಾಂಟೀನ್ ಆವರಣ ಗೋಡೆಯನ್ನು ರಸ್ತೆಗೆ ಅತಿಕ್ರಮಿಸಿಕೊಂಡೇ ನಿರ್ಮಿಸುವುದು ಯಾಕೆ, ಬಿ.ಸಿ.ರೋಡ್ ನಗರ ಅಭಿವೃದ್ಧಿ ಸಂದರ್ಭ ಮತ್ತೆ ಕ್ಯಾಂಟೀನ್ ಆವರಣಗೋಡೆ ಕೆಡಹಬೇಕಾಗುತ್ತದೆ. ಇಂಥ ಸನ್ನಿವೇಶ ನಿರ್ಮಾಣವಾಗುವ ಬದಲು ಗೋಡೆ ನಿರ್ಮಿಸುವಾಗಲೇ ಸರಿಯಾದ ಜಾಗವನ್ನು ಆಯ್ಕೆ ಮಾಡಬಹುದಲ್ಲವೇ, ರಸ್ತೆ ಮಧ್ಯೆಯೇ ಗೋಡೆ ನಿರ್ಮಾಣ ಮಾಡುವ ಹಠ ಏಕೆ ಎಂದು ಜಿಲ್ಲಾಧಿಕಾರಿ ಬಳಿ ಪ್ರಶ್ನಿಸಿದರು.

ಕಂದಾಯ ಇಲಾಖೆಯ ಆರ್.ಐ. ರಾಮ ಕಾಟಿಪಳ್ಳ, ಪೊಲೀಸ್ ಇಲಾಖೆಯ ಎಸ್.ಐ. ಹರೀಶ್ ಮತ್ತಿತರರು ಇದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಚಹ, ಊಟ ವಿತರಣೆಗೂ ಮೊದಲೇ ಸುದ್ದಿಯಾದ ಕ್ಯಾಂಟೀನ್!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*