ಕಂದಾಯ ಇಲಾಖೆ ಬಂಟ್ವಾಳ, ರಾಯಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸರಕಾರದ 94ಸಿ ಹಕ್ಕುಪತ್ರ ಮತ್ತು ವಿವಿಧ ಸರಕಾರಿ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಬುಧವಾರ ಸಂಜೆ ರಾಯಿ ಗ್ರಾಪಂ ನಲ್ಲಿ ನಡೆಯಿತು.
ಈ ಹಿಂದೆ ತಾಲೂಕು ಮಟ್ಟದಲ್ಲಿ ರಾಜಕೀಯ ಪ್ರೇರಿತವಾಗಿ ಅದ್ದೂರಿಯಾಗಿ ನಡೆಸುತ್ತಿದ್ದ ಹಕ್ಕುಪತ್ರ ವಿತರಣೆ ವ್ಯವಸ್ಥೆಗೆ ಬದಲಾಗಿ ಶಾಸಕರು ನೇರವಾಗಿ ಜನರ ಬಳಿ ತೆರಳಿ ಹಕ್ಕುಪತ್ರ ವಿತರಿಸುತ್ತಿರುವುದು ಪ್ರಶಂಶನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಈ ಸಂದರ್ಭ ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾ.ಪಂ.ಸದಸ್ಯೆ ಮಂಜುಳಾ ಸದಾನಂದ, ಗ್ರಾ.ಪಂ.ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ ಮತ್ತಿತರ ಸದಸ್ಯರು ಶುಭ ಹಾರೈಸಿದರು.
ಇದೇ ವೇಳೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ವಿತರಣೆ, 70 ಮಂದಿಗೆ ಹಕ್ಕುಪತ್ರ ವಿತರಣೆ, ರಾಷ್ಟ್ರೀಯ ಕುಟುಂಬ ಸಹಾಯಧನ, ಪ್ರಾಕೖತಿಕ ವಿಕೋಪ ಪರಿಹಾರಧನ ಚೆಕ್ ವಿತರಣೆ, ಶಾಸಕರಿಗೆ ಸನ್ಮಾನ ನೆರವೇರಿಸಲಾಯಿತು.
ಗ್ರಾ.ಪಂ.ಸದಸ್ಯರಾದ ಹರೀಶ ಆಚಾಯ೯ ರಾಯಿ, ರಾಘವ ಅಮೀನ್, ಪದ್ಮನಾಭ ಗೌಡ, ಯಶೋಧ, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಕೆ.ಪರಮೇಶ್ವರ ಪೂಜಾರಿ, ಚಂದಪ್ಪ ಪೂಜಾರಿ ಮತ್ತಿತರರು ಇದ್ದರು. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಸ್ವಾಗತಿಸಿದರು.
ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಜನಾದ೯ನ ವಂದಿಸಿದರು. ಪತ್ರಕತ೯ ಮೋಹನ್ ಕೆ. ಶ್ರೀಯಾನ್ ಕಾಯ೯ಕ್ರಮ ನಿರೂಪಿಸಿದರು. ಗ್ರಾಮಕರಣಿಕ ಪರಿಕ್ಷೀತ್, ಸಹಾಯಕ ರಮೇಶ್ ಹೊಕ್ಕಾಡಿಗೋಳಿ ಸಹಕರಿಸಿದರು.
Be the first to comment on "ರಾಯಿ ಗ್ರಾಪಂನಲ್ಲಿ 94ಸಿ ಹಕ್ಕುಪತ್ರ, ಸವಲತ್ತು ವಿತರಣೆ"