ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ ಸಾವಿರದ ಸನಿಹ

ಆಗ್ನೇಯ ಏಷ್ಯಾದ ದ್ವೀಪರಾಷ್ಟ್ರ ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿಗೆ ಬಲಿಯಾದವರ ಸಂಖ್ಯೆ ಸಾವಿರದ ಸನಿಹಕ್ಕೆ ತಲುಪಿದೆ.

People survey the damage outside a shopping mall following earthquakes and tsunami in Palu, Central Sulawesi, Indonesia on Sunday. (AP Photo/Tatan Syuflana)

ಅಧಿಕೃತವಾಗಿ 832 ಮಂದಿ ಮೃತರ ಲೆಕ್ಕ ಸಿಕ್ಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ ಎನ್ನಲಾಗಿದೆ. 540 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು

1.5 ಮೀಟರ್ ಎತ್ತರದ ಬೃಹತ್ ಅಲೆಗೆ ಸಿಲುಕಿದ 3.5 ಲಕ್ಷ ಜನಸಂಖ್ಯೆಯುಳ್ಳ ಕರಾವಳಿ ನಗರ ಪಲುವಿನಲ್ಲೇ ಹೆಚ್ಚಿನ ವಿಪತ್ತು ಸಂಭವಿಸಿದೆ. ಸುನಾಮಿ ಸಂಭವಿಸಿ ಎರಡು ದಿನಗಳಾದ ಬಳಿಕ ಸದ್ಯಕ್ಕೆ ಪಲು ನಗರದ ವರದಿಗಳು ಮಾತ್ರ ದೊರಕಿದ್ದು, ಇತರೆ ಭಾಗಗಳಲ್ಲಿ ಉಂಟಾದ ಅನಾಹುತದ ವಿವರ ಇನ್ನಷ್ಟೇ ಲಭಿಸಬೇಕಿದೆ.

ಭೂಕಂಪದ ಕೇಂದ್ರಕ್ಕೆ ಸನಿಹವಿದ್ದ, 3 ಲಕ್ಷ ಜನರು ವಾಸವಿರುವ ಡೊಂಗಾಲಾ ಜಿಲ್ಲೆಯ ಮಾಹಿತಿ ಏನೇನೂ ಬಂದಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳೇ ಹೇಳಿದ್ದಾರೆ.

ಪಲು ನಗರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಂಡೋನೇಷ್ಯಾದ ಮಿಲಿಟರಿ ಧಾವಿಸಿದೆ. ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ರೋ-ರೋ ಎಂಬ ಹೊಟೇಲ್ ಒಂದರಲ್ಲೇ ಕನಿಷ್ಠ 150 ಮಂದಿ ಸಿಲುಕಿರುವ ಶಂಕೆಯಿದೆ. ಒಬ್ಬ ಮಹಿಳೆಯನ್ನು ಅಲ್ಲಿಂದ ಜೀವಂತವಾಗಿ ಹೊರಕ್ಕೆ ಕರೆತರಲಾಗಿದೆ. ಒಳಗಿನಿಂದ ಇನ್ನೂ ಆರ್ತನಾದ ಕೇಳುತ್ತಿದೆ ಎಂದು ಕಾರ್ಯಾಚರಣಾ ಸಿಬ್ಬಂದಿ ಹೇಳಿದ್ದಾರೆ. ಬೀಚ್ ಉತ್ಸವಕ್ಕಾಗಿ ಸಾವಿರಾರು ಮಂದಿ ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲೇ ಶುಕ್ರವಾರ 7.5 ತೀವ್ರತೆಯ ಭೂಕಂಪನ ಉಂಟಾಗಿ ಸಮುದ್ರದಲ್ಲಿ ಸುನಾಮಿ ಎದ್ದಿತ್ತು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ ಸಾವಿರದ ಸನಿಹ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*