ನರಿಕೊಂಬು ಗ್ರಾಮ ಕರ್ಬೆಟ್ಟು ನಿವಾಸಿ ಹಿರಿಯ ಹವ್ಯಾಸಿ ಮದ್ದಳೆ ವಾದಕ ಹಾಗೂ ಭಾಗವತ ವಾಮನ ಕುಲಾಲ್ (71) ಸೆ.26ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಜಾಹೀರಾತು
ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಟೂರಿಸ್ಟ್ ಟ್ಯಾಕ್ಸಿಯನ್ನು ನಡೆಸುತ್ತಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಪರಿಸರದಲ್ಲಿ ಪ್ರಸಿದ್ಧರಾಗಿದ್ದರು. ಇರಾ ಗೋಪಾಲಕೃಷ್ಣ ಭಾಗವತರಲ್ಲಿ ಭಾಗವತಿಕೆ ಮತ್ತು ಮದ್ದಳೆಯನ್ನು, ನಾಟಿ ಕೃಷ್ಣರಾಜ ಶೆಟ್ಟರಲ್ಲಿ ಅರ್ಥಗಾರಿಕೆಯನ್ನು ಅಭ್ಯಾಸ ಮಾಡಿದ್ದ ಅವರು, ಬೊಂಡಾಲ ದಿ. ರಾಮಣ್ಣ ಶೆಟ್ಟಿ ಅವರ ಜೊತೆ ಹಲವಾರು ವರ್ಷ ಸರ್ವೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 1970ರಿಂದಲೇ ಟೂರಿಸ್ಟ್ ಕಾರನ್ನು ಸ್ವಂತವಾಗಿ ಹೊಂದುವ ಮೂಲಕ ವೃತ್ತಿಯನ್ನು ಆರಂಭಿಸಿದ್ದ ಅವರು ಬಿ.ಸಿ.ರೋಡಿನ ಹಿರಿಯ ಟ್ಯಾಕ್ಸಿ ಡ್ರೈವರ್ ಆಗಿದ್ದವರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹವ್ಯಾಸಿ ಯಕ್ಷಗಾನ ಕಲಾವಿದ ವಾಮನ ಕುಲಾಲ್ ನಿಧನ"