ಬಸ್ ಚಾಲಕನ ಎಡವಟ್ಟು: ಜೀವನಕ್ಕೆ ಬಿತ್ತು ದೊಡ್ಡ ಪೆಟ್ಟು

ದ.ಕ.ಜಿಲ್ಲೆಯ ಪುನರೂರಿನ ಶಿವಪ್ರಕಾಶ್ ರಾವ್, ಬೆಂಗಳೂರಿನ ಪುಟ್ಟ ಸಂಬಳದಲ್ಲಿ ಮಾರ್ಕೆಟಿಂಗ್ ಫೀಲ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಟ್ಟಿನಿಂದಲೇ ಕಷ್ಟಸಹಿಷ್ಣುಗಳಾದ ಇವರಿಗೆ ಇತ್ತೀಚೆಗಷ್ಟೇ ದೊಡ್ಡ ಕಂಪನಿಯೊಂದರ ಕೆಲಸದ ಅವಕಾಶ ಲಭಿಸಿತ್ತು. ಎಲ್ಲವನ್ನೂ ಬಸ್ ಮಣ್ಣುಪಾಲು ಮಾಡಿತು. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬಿಎಂಟಿಸಿ  ಬಸ್ ಹತ್ತುವ ಸಂದರ್ಭ, ಆಟೊಮೆಟಿಕ್ ಬಾಗಿಲಿಗೆ ಇವರ ಕಾಲೊಂದು ಸಿಕ್ಕಿಹಾಕಿಕೊಂಡಿತು. ಅದೇ ವೇಳೆ ಇನ್ನೊಂದು ಕಾಲು ಬಸ್ಸಿನ ಟೈಯರಿಗೆ ತಾಗಿ ಕಾಲಿನ ಜೋಡಣೆ ಜಾರಿತು. ಕೂಡಲೇ ಸಾರ್ವಜನಿಕರ ಸಹಾಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕ ತಾನು ಬಸ್ ಹತ್ತುವುದನ್ನು ಗಮನಿಸದ ಕಾರಣ ಹೀಗಾಯಿತು ಎನ್ನುವ ಶಿವಪ್ರಕಾಶ್, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಹಾಗು 6-7 ತಿಂಗಳಿಗೂ ಅಧಿಕ ಸಂಪೂರ್ಣ ಬೆಡ್ ರೆಸ್ಟ್ ನ ಅಗತ್ಯವಿದೆ. ಮನೆಗೆ ಆಧಾರಸ್ತಂಭವಾದ ಇವರ ಈ ಪರಿಸ್ಥಿತಿಯಿಂದ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರ ನೆರವು ಕೋರುತ್ತಿದ್ದಾರೆ.

ಜಾಹೀರಾತು

ಇವರ ಬ್ಯಾಂಕ್ ಖಾತೆ ಡೀಟೇಲ್ ಹೀಗಿದೆ:

Shivaprakash Rao C S

Ac No : 113201011000861

Vijaya Bank Founders br.Mangalore

ifsc Code : Vijb 0001132

Patym ಮೂಲಕ ಸಹಾಯ ಮಾಡುವವರು : 9483198529 ಗೆ ಹಣ ಕಳುಹಿಸಬಹುದು

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಸ್ ಚಾಲಕನ ಎಡವಟ್ಟು: ಜೀವನಕ್ಕೆ ಬಿತ್ತು ದೊಡ್ಡ ಪೆಟ್ಟು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*