ಬೀದಿ ವ್ಯಾಪಾರ, ಅಂಗಡಿಗಿಂತ ಜಾಸ್ತಿ ಇದೆ ಲೆಕ್ಕಾಚಾರ!!

ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ಟ್ರಾಫಿಕ್ ದಟ್ಟಣೆ ಇದ್ದಾಗಲೂ ಬೀದಿ ಬದಿ ವ್ಯಾಪಾರಿಗಳು ತರಕಾರಿ ಮಾರಲು ಅನುಮತಿ ಸಿಕ್ಕಿದೆಯೋ ಇಲ್ಲವೋ ಎಂಬ ವಿಚಾರ ಚರ್ಚೆಯಲ್ಲಿದ್ದಂತೆ, ಇಲ್ಲಿನ ತರಕಾರಿ ದರವೂ ಅಂಗಡಿಗಿಂದ ಜಾಸ್ತಿ ಎಂಬ ವಿಚಾರವನ್ನು ಓದುಗರು ಬಂಟ್ವಾಳ ನ್ಯೂಸ್ ಗಮನಕ್ಕೆ ತಂದಿದ್ದಾರೆ.

ಜಾಹೀರಾತು

ಇಲ್ಲಿ ತರಕಾರಿ ಮಾರುವುದರಿಂದ ಖರೀದಿಗಾಗಿ ಸ್ಕೂಟರ್ ಕಾರುಗಳು ನಿಲ್ಲುವುದು, ಅದರಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಯಾವುದಾದರೂ ವಾಹನಗಳು ಡಿಕ್ಕಿಯಾಗುವುದು ಇನ್ನಿತರ ಸಮಸ್ಯೆಗಳು ಇರುವಂತೆಯೇ ಹೋಗಲಿ ಬಿಡಿ, ಕಡಿಮೆ ರೇಟಿಗೆ ತರಕಾರಿ ಮಾರುತ್ತಾರಲ್ವ, ಎಂದು ಜನಸಾಮಾನ್ಯರೂ ಸುಮ್ಮನಿದ್ದರು. ಆದರೆ ಬಿ.ಸಿ.ರೋಡಿನಲ್ಲಿರುವ ಇತರ ತರಕಾರಿ ಅಂಗಡಿಗಳಲ್ಲಿ ಭಾನುವಾರ ಟೊಮೆಟೋಗೆ 11 ರೂ ಇದ್ದರೆ, ಬೀದಿ ಬದಿ ತರಕಾರಿ ವ್ಯಾಪಾರಿಗಳು 20 ರೂಗೆ ಮಾರುತ್ತಿದ್ದರು ಎಂಬ ವಿಚಾರವನ್ನು ಓದುಗರು ನಮ್ಮ ವೆಬ್ ನ್ಯೂಸ್  ಗಮನಕ್ಕೆ ತಂದಿದ್ದಾರೆ. ಯಾವುದಕ್ಕೂ ಮೊದಲು ಅಂಗಡಿ ಮತ್ತು ಬೀದಿ ಬದಿಯಲ್ಲಿ ರೇಟ್ ಒಮ್ಮೆ ವಿಚಾರಿಸಿ ನೋಡಿ ಎಂದು ಅವರು ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸರಿಯಾದ ದರ ನಿಗದಿ ಕುರಿತು ರಾಜಕೀಯ ಪಕ್ಷಗಳೂ ಆಸಕ್ತಿ ವಹಿಸಿದ್ದು, ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪವಾಗಿತ್ತು. ಬಿ.ಸಿ.ರೋಡ್ ನ ತರಕಾರಿ ಅಂಗಡಿಗಳಲ್ಲಿ ತರಕಾರಿ ಮಾರುವವರು ಹಾಗೂ ಬೀದಿ ಬದಿಯಲ್ಲಿ ತರಕಾರಿ ಮಾರುವವರು ಮಾರುವುದು ತರಕಾರಿಯನ್ನೇ ಆದರೂ ದರವ್ಯತ್ಯಾಸ ಇಷ್ಟೊಂದು ಇರುತ್ತದಾ ಎಂದು ಓದುಗರು ಕೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬೀದಿ ವ್ಯಾಪಾರ, ಅಂಗಡಿಗಿಂತ ಜಾಸ್ತಿ ಇದೆ ಲೆಕ್ಕಾಚಾರ!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*