ಕರ್ನಾಟಕ ರಾಜ್ಯ ಕರಾವಳಿ ಕುಲಾಲ / ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಹಾಗೂ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನ ಸಭೆ ಕ್ಷೇತ್ರ ಆಶ್ರಯದಲ್ಲಿ 12ರಂದು ಭಾನುವಾರ ಬಿ.ಸಿ.ರೋಡು ಪೊಸಳ್ಳಿ ಕುಲಾಲ ಭವನದಲ್ಲಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಸರುಗದ್ದೆಯಲ್ಲಿ ಕೆಸರ್ದ ಕಂಡೊಡು ಕುಸೆಲ್ದ ಗೊಬ್ಬುಲು – ಎಸಲ್ ರಡ್ಡ್ ಕಾರ್ಯಕ್ರಮ ಕುಲಾಲ ಸಮಾಜ ಬಾಂಧವರಿಗಾಗಿ ನಡೆಯಲಿದೆ.
ಪೂರ್ವಾಹ್ನ 8.30ಕ್ಕೆ ರವಿ ನಡುಬೊಟ್ಟು, ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೊಟ್ಟು ಧರ್ಮದರ್ಶಿ ರವಿ ನಡುಬೊಟ್ಟು ಉದ್ಘಾಟಿಸಲಿದ್ದಾರೆ. ಕುಲಾಲರ ಮಹಾಸಂಘ ಅಧ್ಯಕ್ಷ ಡಾ| ಶ್ರೀನಿವಾಸ್, ಕುಲಾಲ ಕುಂಬಾರ ಯುವ ವೇದಿಕೆ ದಶಮಾನೋತ್ಸವದ ಚಾಲನೆ ನೀಡುವರು.
ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಎಳ್ತೂರು, ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವೀರಾಜ್ ಯುವ ವೇದಿಕೆ ಜಿಲ್ಲಾಧ್ಯಕ್ಷ , ಜಯೇಶ್ ಗೋವಿಂದ್, ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ. ಎಂ. ಕುಲಾಲ್ ಕುಲಾಲ ಸಮಾಜದ ನಾಯಕ ಅನಿಲ್ದಾಸ್ ಕುಲಾಲ ಮಹಿಳಾ ಸಂಘ ರಾಜ್ಯ ಉಪಾಧ್ಯಕ್ಷೆ ಯಶೋಧ ಕೃಷ್ಣಪ್ಪ, ರಾಜ್ಯ ಟೈಲರ್ ಅಸೋಸಿಯೇಶನ್ ಉಪಾಧ್ಯಕ್ಷ ಸುರೇಶ್ ಟೈಲರ್, ಯಶಸ್ವೀ ಮೂಲ್ಯ, ಕಮಲಾಕ್ಷ ಮೊಗರ್ನಾಡು, ಕೊರಗಪ್ಪ ಮೂಲ್ಯ ಮಣಿಹಳ್ಳ ಭಾಗವಹಿಸುವರು.
ಸಮಾರೋಪ ಸಮಾರಂಭ ಸಂಜೆ ೫-೩೦ಕ್ಕೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸೌಂದರ್ಯ ರಮೇಶ್ ಕಟೀಲು, ಸೌಂದರ್ಯ ಪ್ಯಾಲೇಸ್ ಮ್ಹಾಲಕರು, ಸತೀಶ್ ನಡೂರು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರು, ಗಂಗಾಧರ ಶೇರಾ ಬೀಡಿ ಉದ್ಯಮಿಗಳು, ಗೌತಮ್ ಜಿ. ಕುಲಾಲ್ ಸುಜುಕಿ ಅಧಿಕೃತ ಮಾರಾಟಗಾರರು ಮಂಗಳೂರು ಭಾಗವಹಿಸಲಿದ್ದಾರೆ.
ಕೆಸರು ಗದ್ದೆಯಲ್ಲಿ ಏಳು ವಿಭಾಗದಲ್ಲಿ 32ಕ್ಕಿಂತಲೂ ಹೆಚ್ಚು ಸ್ಪರ್ಧೆಗಳು ನಡೆಯಲಿದ್ದು 500ಕ್ಕಿಂತಲೂ ಹೆಚ್ಚು ತಾಲೂಕಿನ ಕುಲಾಲ ಕ್ರೀಡಾ ಪಟುಗಳು, 1000ಕ್ಕಿಂತಲೂ ಹೆಚ್ಚು ಕ್ರೀಡಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಅಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ಹರಿಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "12ರಂದು ಕುಲಾಲರ ಯುವವೇದಿಕೆ ಪದಗ್ರಹಣ, ಕೆಸರುಗದ್ದೆ ಆಟ"