ಪ್ರಮುಖ ಸುದ್ದಿಗಳು

ಸಂಕಷ್ಟದಲ್ಲಿರುವ ಹಮೀದ್ ಗೆ ಸಾಂತ್ವನ

ಕುವೈಟಿನ ಆರ್ದಿಯಾ ಎಂಬಲ್ಲಿ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸವನ್ನು ಕಳೆದ ಏಳು ತಿಂಗಳಿಮದ ಮಾಡುತ್ತಾ, ವೀಸಾ ಕಾಲಾವಧಿ ಮುಗಿದ ಕಾರಣ ತಾಯ್ನಾಡಿಗೆ ಮರಳಲಾರದೆ  ಹಮೀದ್ ಇಸ್ಲಾಂ ಎಂಬವರ ಸಂಕಷ್ಟವನ್ನು ಬಶೀರ್ ಸಾಲೆತ್ತೂರು ಅವರು ನೀಡಿದ ಮಾಹಿತಿ ಮೇರೆಗೆ ಕೆ.ಸಿ.ಎಫ್.  ಪರ್ವಾನಿಯಾ ಸೆಕ್ಟರ್ ಕಾರ್ಯದರ್ಶಿ ಮಜಮ್ಮಹ್ ಬಾಯಾರ್, ಕುವೈಟ್ ಕಮಿಟಿ ಟ್ರಸ್ಟ್ ನ ಹೈದರಲಿ ಕಲ್ಲರ್ಪೆ ಭೇಟಿಯಾಗಿ ಸಾಂತ್ವನ ಹೇಳಿದರು.

ಜಾಹೀರಾತು

ಹಮೀದ್ ಇಸ್ಲಾಂ ಅವರ ವಿಸಾ ಕಾಲಾವಾಧಿ ಮುಗಿದಿರುವ ಕಾರಣ ಜುಲೈ ತಿಂಗಳಲ್ಲಿ ಮಗಳ ಮದುವೆಗೂ ಹೋಗಲು ಸಾಧ್ಯವಾಗದೆ ಇತರರಲ್ಲಿ ಕಷ್ಟವನ್ನು ಹೇಳಲಾಗದೆ ಪರಿತಪಿಸುತ್ತಿದ್ದರು. ಈ ವಿಷಯವು ಕುವೈಟ್ ಕೆ.ಸಿ.ಫ್ ಸದಸ್ಯರಿಗೆ ತಿಳಿದಾಗ ಇಸ್ಲಾಂ ಅವರನ್ನು ಸಂಪರ್ಕಿಸಿ ಅವರ ಯಜಮಾನನಲ್ಲಿ ಮಾತುಕತೆ ನಡೆಸಿ ಹೊಸ ವಿಸಾ ಮತ್ತು ಅವರ ಬಾಕಿ ಇರುವ ವೇತನವನ್ನು ನೀಡಲು ಕೇಳಿಕೊಂಡಾಗ ಕೆ.ಸಿ.ಫ್ ಸದಸ್ಯರ ಮಾತಿಗೆ ಮಣಿದು ಎಲ್ಲಾ ವ್ಯವಸ್ಥೆಯನ್ನು ಮಾಡುವುದಾಗಿ ಒಪ್ಪಿಕೊಂಡರು. ಹಮೀದರವರಿಗೆ ಧೈರ್ಯ ತುಂಬುವ ಕಾರ್ಯವನ್ನು ಹೈದರ್ ಕಲ್ಲರ್ಪೆಯವರ ಮಾಡಿದರು. ಜೊತೆಯಲ್ಲಿ ಇಬ್ರಾಹಿಂ ಸಹದಿ ಗುಂಡ್ಯೂರು ಬಾಕ್ರಬೈಲ್ ಉಪಸ್ಥಿತರಿದ್ದರು.

ಬಶೀರ್ ಅಗರಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ