ಬಂಟ್ವಾಳ ಸಹಿತ ಹಲವೆಡೆ ಮಂಗಳವಾರ ನಸುಕಿನ ಜಾವದಿಂದಲೇ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಶಾಲಾ, ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ಮಂದಿ ಇದರಿಂದ ಭಾರಿ ತೊಂದರೆಗೆ ಒಳಗಾದರು.
ಜಾಹೀರಾತು
ಭಾರಿ ಗಾಳಿಗೆ ಕೈಕುಂಜೆಯಲ್ಲಿರುವ ತುಕ್ರಪೂಜಾರಿಯವರ ಮಗ ಡೊಂಬಯ್ಯ ಪೂಜಾರಿ ಅವರ ಮನೆಗೆ ಬೃಹದಾಕಾರವಾದ ಮರ ಬಿದ್ದಿದೆ. ಇದರಿಂದ ಮನೆಗೆ ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಶಿವನಂದ ನಾಟೆಕಾರ್ ಸಿಬಂದಿ ಸದಾಶಿವ ಕೈಕಂಬ, ಶೀತಲ್ ಹಾಗೂ ಪುರಸಭಾ ಸದಸ್ಯೆ ಸುಗುಣ ಎ.ಕಿಣಿ ಭೇಟಿ ನೀಡಿದರು. ತಾಲೂಕಿನ ಹಲವೆಡೆ ಬಿರುಗಾಳಿಯಿಂದ ಮರಗಳು ಧರೆಗುರುಳಿರುವ ಶಂಕೆಯನ್ನು ಇಲಾಖಾ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡ್ ನಲ್ಲಿ ಭಾರಿ ಗಾಳಿ, ಮಳೆ: ಉರುಳಿದ ಮರ ಮನೆಗೆ ಹಾನಿ"