ಕೊನೆಗೂ ಬಂಟ್ವಾಳಕ್ಕೆ ಎಎಸ್ಪಿ ನಿಯುಕ್ತಿ, ಅಧಿಕಾರ ಸ್ವೀಕಾರ


ಕೊನೆಗೂ ಬಂಟ್ವಾಳ ಪೊಲೀಸ್ ಉಪವಿಭಾಗಕ್ಕೆ ಎಎಸ್ಪಿ ನಿಯುಕ್ತಿಯಾಗಿದೆ. ಐಪಿಎಸ್ ಅಧಿಕಾರಿ ರಿಷಿಕೇಶ್ ಭಗವಾನ್ ಅವರು ಗುರುವಾರ ಡಿವೈಎಸ್ಪಿ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.

ರಿಶಿಕೇಶ್ ಭಗವಾನ್ ಎಎಸ್ಪಿಯಾಗಿ ಗುರುವಾರ ಬಂಟ್ವಾಳದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಡಿವೈಎಸ್ಪಿ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್ಸೈಗಳಾದ ಯಲ್ಲಪ್ಪ, ಹರೀಶ್, ಪ್ರಸನ್ನ ಮತ್ತು ಚಂದ್ರಶೇಖರ್ ಉಪಸ್ಥಿತರಿದ್ದರು.

ಕಾರ್ಕಳದಲ್ಲಿ ಎ.ಎಸ್.ಪಿಯಾಗಿ ಕಾರ್ಯ ನಿರ್ವಹಿಸಿರುವ ರಿಷಿಕೇಶ್ ಅವರು ಇದೀಗ ಬಂಟ್ವಾಳ ಉಪವಿಭಾಗಕ್ಕೆ ಎ.ಎಸ್.ಪಿ.ಯಾಗಿ ವರ್ಗಾವಣೆಗೊಂಡಿದ್ದಾರೆ. ಅರುಣ್ ಕುಮಾರ್ ಐ.ಪಿ.ಎಸ್ ಬಳಿಕ ತೆರವಾಗಿದ್ದ ಬಂಟ್ವಾಳ ಉಪವಿಭಾಗಕ್ಕೆ ವಿಧಾನ ಸಭಾ ಚುನಾವಣೆ ಯ ಸಂದರ್ಭದಲ್ಲಿ ಪ್ರಭಾರ ಡಿ.ವೈ.ಎಸ್.ಪಿ.ಯಾಗಿ ಡಿ.ಕುಮಾರ್ ಅವರನ್ನು ನಿಯೋಜಿಸಲಾತ್ತು.

ಕಳೆದ ವರ್ಷ ನಿಷೇಧಾಜ್ಞೆ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿತ್ತು. ಎಸ್ಪಿ, ಎಡಿಶನಲ್ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದವು. ಡಿವೈಎಸ್ಪಿ ಬದಲು ಎಎಸ್ಪಿ ಡಾ. ಅರುಣ್ ಬಂದು ಕೆಲಕಾಲ ಕೆಲಸ ನಿರ್ವಹಿಸಿ ವರ್ಗಾವಣೆ ಹೊಂದಿದರು. ಆದರೆ ಅವರ ಬದಲಿಗೆ ಪೂರ್ಣಕಾಲಿಕವಾಗಿ ಹುದ್ದೆ ನಿರ್ವಹಿಸಲು ಯಾರೂ ಬರಲಿಲ್ಲ. ಒಂದು ಹಂತದಲ್ಲಿ ಎಡಿಶನಲ್ ಎಸ್ಪಿ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿತ್ತು. ಆದರೆ ಎಡಿಶನಲ್ ಎಸ್ಪಿ ಬಿಡಿ, ಎಎಸ್ಪಿ ಹುದ್ದೆಯ ಅಧಿಕಾರಿಯೂ ಬಂಟ್ವಾಳದಲ್ಲಿ ಕುಳಿತುಕೊಂಡಿರಲಿಲ್ಲ.

ಜಾಹೀರಾತು

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಒಳಪಟ್ಟಂತೆ ಬಿ.ಸಿ.ರೋಡ್ ನಲ್ಲಿರುವ ಹಳೇ ಪೊಲೀಸ್ ಠಾಣೆ ಕಟ್ಟಡದಲ್ಲಿ ಎಎಸ್ಪಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. 2013 ರಲ್ಲಿ ಬಂಟ್ವಾಳ ಉಪವಿಭಾಗ ಪೋಲೀಸ್ ಕಚೇರಿ ಬಿ.ಸಿ.ರೋಡಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಡಿ.ವೈ.ಎಸ್.ಪಿ. ಸದಾನಂದ ವರ್ಣೇಕರ್, ಡಿ ವೈ.ಎಸ್.ಪಿ.ರಶ್ಮೀ ಪರಡ್ಡಿ, ಎ.ಎಸ್.ಪಿ. ರಾಹುಲ್ ಕುಮಾರ್, ಡಿ.ವೈ.ಎಸ್.ಪಿ.ರವೀಶ್ ಮತ್ತು ಎ.ಎಸ್.ಪಿ.ಅರುಣ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದರು. ಅರುಣ್ ಕುಮಾರ್ ಅವರು ಲೋಕಾಯುಕ್ತ ಎಸ್.ಪಿ.ಯಾಗಿ ಬೆಂಗಳೂರು ನಗರಕ್ಕೆ ವರ್ಗಾವಣೆಯಾದ ಬಳಿಕ ಪ್ರಭಾರ ಡಿವೈಎಸ್ಪಿಯಾಗಿ ಕುಮಾರ್ ನಿಯುಕ್ತಿಗೊಂಡಿದ್ದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಕೊನೆಗೂ ಬಂಟ್ವಾಳಕ್ಕೆ ಎಎಸ್ಪಿ ನಿಯುಕ್ತಿ, ಅಧಿಕಾರ ಸ್ವೀಕಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*