ಬಂಟ್ವಾಳದ ಗ್ಯಾರೇಜು ಮಾಲೀಕರ ಸಂಘ ವತಿಯಿಂದ ಭಾನುವಾರ ಗಾಣದಪಡ್ಪು ಬೈಪಾಸ್ ರಸ್ತೆಯ ಗುಂಡಿಗಳನ್ನು ಕೆoಪು ಕಲ್ಲುಗಳಿಂದ ತುಂಬಿಸಿ ರಸ್ತೆ ಸಂಚಾರಕ್ಕೆ ಸುಗಮ ಮಾಡಿ ಕೊಡಲಾಯಿತು.
ಸಂಘದ ಅಧ್ಯಕ್ಷ ವಿಶ್ವನಾಥ ಬಿ, ಕಾರ್ಯದರ್ಶಿ ಸುಧೀರ್, ಗೌರವ ಸಲಹೆಗಾರರಾದ ಸುಧಾಕರ ಸಾಲ್ಯಾನ್, ಅನ್ನು ಪೂಜಾರಿ, ರಮೇಶ್ ಬೈಪಾಸ್, ಸದಸ್ಯರಾದ ಪ್ರಸಾದ್ ಬಂಗೇರ, ಮನ್ಸೂರ್, ಸುರೇಶ್ ಕುಲಾಲ್, ಉಮೇಶ್, ಸುರೇಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.